ಹೊಸದಿಗಂತ ವರದಿ, ಗದಗ:
ಇಡಿ ಕರ್ನಾಟಕದ ಜನತೆ ಮೆಚ್ಚುವಂತಹ ಆಡಳಿತವನ್ನು ನಾವು ನೀಡುತ್ತಿದ್ದು, ದೇವರ ಆಶಿರ್ವಾದದಿಂದ ೨೦೨೩ ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಬಸ್ ಪಾಸ್ ವಿತರಿಸಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆಯಿಂದ ಅಡಮಾನವಿಟ್ಟ ಪಡೆದ ಹಣದಿಂದ ನೌಕರರ ಭವಿಷ್ಯನಿಧಿಗೆ ನೀಡಲಾಗಿದೆ. ಒಮದೂವರೆ ತಿಂಗಳ ನೌಕರರ ವೇತನ ಬಾಕಿ ಇದ್ದು ವಾರದೊಳಗೆ ಈ ಸಮಸ್ಯೆಯನ್ನು ಬಗೆಹರಿಸಿ ಪ್ರತಿ ತಿಂಗಳು ವೇತನ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ, ಬಿಜೆಪಿ ಪಂಚರಾಜ್ಯ ಚುನಾವಣೆಯಲ್ಲಿ ವಿಜಯದ ನಾಗಾಲೋಟ ಮುಂದುವರೆಸಿದ್ದು, ದೇಶಾದ್ಶಂತ ಜನರು ಬಿಜೆಪಿ ಪರವಾಗಿ ಇದ್ದಾರೆ ಎಂದು ಮತ್ತೊಮ್ಮೆ ಸಾಬೀತಾಗಿದೆ. ಇಡೀ ದೇಶದಲ್ಲಿ ಕಾಂಗ್ರೇಸ್ ಧೂಳಿಪಟ ಆಗುತ್ತಿದೆ, ಮುಂಬರುವ ದಿನಗಳಲ್ಲಿ ರಾಹುಲ್ ಗಾಂಧಿ, ಪಾರ್ಟ್ ಟೈಮ್ ನಾಯಕರಾಗಿ ಉಳಿಯಲಿದ್ದಾರೆ. ಇಡೀ ದೇಶದಲ್ಲಿ ದಿನದಿಂದ ದಿನಕ್ಕೆ ಕಾಂಗ್ರೇಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ