ಹೊಸ ದಿಗಂತ, ಬೀದರ್:
ಬಿರು ಬಿಸಿಲಿಗೆ ಬಳಲಿ ಬೆಂಡಾಗಿದ್ದ ಬೀದರ್ನ ಜನತೆಗೆ ಭಾನುವಾರ ವರುಣ ಖುಷಿ ನೀಡಿದ್ದಾನೆ.
ಭಾನುವಾರ ಸಂಜೆ ಬೀದರ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸತತವಾಗಿ ಎರಡು ತಾಸು ಸುರಿದ ಧಾರಾಕಾರ ಮಳೆ, ಬಿಸಿಲಿನಿಂದ ಬೆವತಿದ್ದವರಿಗೆ ತಂಪು ನೀಡಿದೆ.
ಇದೇ ವೇಳೆ ಮಾವಿನ ಬೆಳೆಗೆ ಮಳೆ ಅಪಾರ ಹಾನಿ ತಂದಿಟ್ಟಿದೆ. ಕೃಷಿಕನಿಗೆ ಕೈಗೆ ಸಿಕ್ಕ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಮಾವಿನ ಸೀಜನ್ ಆರಂಭಕ್ಕೂ ಮುನ್ನವೇ ಮಳೆ ಮಾವಿನ ಕೃಷಿಗೆ ಹಾನಿ ಉಂಟು ಮಾಡಿದೆ. ಜಿಲ್ಲೆಯ ತೆಲಂಗಾಣ ಗಡಿ ಭಾಗದಲ್ಲಿ ಚಿಲ್ಲರ್ಗಿ ಚೆಕ್ ಪೋಸ್ಟ್ ಗಾಳಿ ಮಳೆಯಿಂದ ಹಾರಿ ಹೋಗಿ ರಸ್ತೆ ಪಕ್ಕದಲ್ಲಿ ಬಿದ್ದುಕೊಂಡಿದೆ. ಈ ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ