ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುರಿ ಜಗನ್ನಾಥ ರತ್ನ ಭಂಡಾರದಲ್ಲಿ ಏನಿದೆ ಎಂಬ ಕುತೂಹಲದಿಂದ ಸಲ್ಲಿಸಲಾದ ಮಾಹಿತಿ ಹಕ್ಕು ಅರ್ಜಿಗೆ ಜಗನ್ನಾಥ ದೇಗುಲದ ಆಡಳಿತ ಮಂಡಳಿ ಯಾವುದೇ ರೀತಿಯ ಉತ್ತರ ಕೊಟ್ಟಿಲ್ಲ!
ಬಲಂಗಿರ್ ಮೂಲದ ಆರ್ಟಿಐ ಕಾರ್ಯಕರ್ತ ಹೇಮಂತ್ ಪಾಂಡ್ ಎಂಬವರು ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ದೇವಾಲಯದಿಂದ ಯಾವುದೇ ಮಾಹಿತಿ ಬಾರದಿರುವ ಹಿನ್ನೆಲೆಯಲ್ಲಿ ಭಂಡಾರದ ರಹಸ್ಯ ಇನ್ನಷ್ಟು ರಹಸ್ಯವಾಗಿಯೇ ಉಳಿದಿದೆ.
ದೇವಾಲಯದ ಖಜಾನೆ ಒಳ ಕೋಣೆ ಮತ್ತೆ ತೆರೆಯಲು ಸರ್ಕಾರ ಯಾವುದೇ ಯೋಜನೆ ಹೊಂದಿಲ್ಲ ಎಂಬ ಕಾರಣ ನೀಡಿ ರತ್ನ ಭಂಡಾರದ ರಹಸ್ಯವನ್ನು ಉಳಿಸಿಕೊಳ್ಳಲು ಯತ್ನಿಸಲಾಗಿದೆ.