ಸಿನಿಮಾದಿಂದ ಕೋಮಲ್​ ದೂರವಾಗಲು ಇದೆಯಂತೆ ಕಾರಣ….: ಜಗ್ಗೇಶ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್ ವುಡ್ ನಲ್ಲಿ ತನ್ನದೇ ನಗು, ಹಾಸ್ಯ ನಟನೆ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದ ನಟ ಕೋಮಲ್ ಇದೀಗ ಮತ್ತೆ ಬಣ್ಣಹಚ್ಚಲಿದ್ದಾರೆ.

‘ಕೆಂಪೇಗೌಡ 2’ ನಂತರ ಚಿತ್ರರಂಗದಿಂದ ದೂರವೇ ಇದ್ದ ಕೋಮಲ್​, ಮತ್ತೆ ನಟನೆಗೆ ವಾಪಸ್ಸಾಗಿದ್ದಾರೆ. ಇದರ ಜೊತೆಗೆ ‘ಕಾಲಾಯ ನಮಃ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಆದರೆ ನಟನೆಯಿಂದ ದಿಡೀರ್ ಕೋಮಲ್​ ದೂರಾಗುತ್ತಿರುವುದೇಕೆ? ಎಂಬ ಪ್ರಶ್ನೆ ಕಾಡಿತ್ತು. ಇದಕ್ಕೆ ಸಹೋದರ ಜಗ್ಗೇಶ್ ಉತ್ತರ ನೀಡಿದ್ದಾರೆ. ಕೋಮಲ್​ಗೆ ಕೇತು ದೆಸೆ ಇದ್ದಿದ್ದರಿಂದ, ತಾವೇ ಅವರಿಗೆ ಸ್ವಲ್ಪ ಹುಷಾರಾಗಿರು ಎಂದು ಹೇಳಿದ್ದರಂತೆ.

ಈ ಕುರಿತು ಮಾತನಾಡಿರುವ ಅವರು, ‘ಬಹಳ ದಿನಗಳ ನಂತರ ಕೋಮಲ್​ ನಟನೆಗೆ ಮರಳಿದ್ದಾರೆ. ಚಿತ್ರಕ್ಕೆ ‘ಕಾಲಾಯ ನಮಃ’. ಸರಿಯಾಗಿ ಹೇಳಬೇಕೆಂದರೆ, ಅದು ‘ಕಾಲಾಯ ತಸ್ಮೈ ನಮಃ’ ಎಂದಾಗಬೇಕಿತ್ತು. ಕೃಷ್ಣ ಹೇಳಿದ ಮಾತು ಪ್ರತಿಯೊಬ್ಬ ಮನುಷ್ಯರಿಗೂ ಸಲ್ಲುವಂತದ್ದು. ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವನದಲ್ಲಿ ಏರಿಳಿತಗಳನ್ನು ನೋಡುತ್ತಾನೆ. ಒಮ್ಮೆ ಮೇಲೆ ಹೋದರೆ, ಒಮ್ಮೆ ಕೆಳಗೆ ಇಳಿಯಬೇಕಾಗುತ್ತದೆ. ಪ್ರತಿಭೆ ಇದ್ದರೆ ಮತ್ತೆ ಒಳ್ಳೆಯ ದಿನಗಳನ್ನು ನೋಡುತ್ತಾನೆ. ಕೋಮಲ್​ಗೆ ಕೇತು ದೆಸೆ ಇತ್ತು. ಅವನಿಗೆ ಸಮಸ್ಯೆ ಇದೆ ಎಂದು ಏಳು ವರ್ಷಗಳ ಹಿಂದೆಯೇ ಹೇಳಿದ್ದೆ. ಹುಷಾರಾಗಿರುವಂತೆಯೂ ಹೇಳಿದ್ದೆ.

ಇಂಥದ್ದೇ ಒಂದು ಸಮಸ್ಯೆ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಅವರಿಗೂ ಎದುರಾಗಿತ್ತಂತೆ. ‘ಈ ದೆಸೆ ಬಂದಾಗ ಅಮಿತಾಭ್​ ಏಳು ವರ್ಷ ಮನೆಯಲ್ಲಿ ಇರಬೇಕಾಯಿತು. ಏಳು ವರ್ಷಗಳ ನಂತರ ಅಮರ್​ ಸಿಂಗ್​, ಅಮಿತಾಭ್​ ಅವರನ್ನು ಕರೆದುಕೊಂಡು ಹೋಗಿ ಅಮರನಾಥ ದರ್ಶನ ಮಾಡಿಸಿದರು. ಆ ನಂತರ ಅಮಿತಾಭ್​ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು. ಈಗ ಅದೇ ಅಮಿತಾಭ್​ 200 ಕೋಟಿ ಟ್ಯಾಕ್ಸ್​ ಕಟ್ಟುತ್ತಾರೆ. ಕೋಮಲ್​ಗೂ ಅದೇ ಕೇತು ಸಮಸ್ಯೆ ಇತ್ತು. 2022ರಲ್ಲಿ ಮುಗಿಯುತ್ತದೆ. ಆ ನಂತರ 20 ವರ್ಷ ನಿನ್ನದೇ ಎಂದು ಚಾಲೆಂಜ್​ ಮಾಡಿದ್ದೆ. ಯಾವ ಕ್ಷೇತ್ರಕ್ಕೆ ಹೋದರೂ ಅವನು ಗೆಲ್ಲುತ್ತಾನೆ. ಅವನನ್ನು ಆ ಭಗವಂತನೇ ಕಾಪಾಡುತ್ತಾನೆ. ಅಂಥದ್ದೊಂದು ಕಾಲ ಈಗ ಕೋಮಲ್​ಗೆ ಬಂದಿದೆ’ ಎನ್ನುತ್ತಾರೆ ಜಗ್ಗೇಶ್​.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!