Monday, December 4, 2023

Latest Posts

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡದ ಸುಪ್ರೀಂ ಕೋರ್ಟ್‌: ನನ್ನೆಲ್ಲಾ ಪ್ಲ್ಯಾನ್‌ ಉಲ್ಟಾ ಆಯಿತು ಎಂದ ಖ್ಯಾತ ಅಥ್ಲೀಟ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುಪ್ರೀಂ ಕೋರ್ಟ್‌ ಮಂಗಳವಾರ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದ್ದು, ಇದರ ಬೆನ್ನಲ್ಲೇ ದೇಶದ ಪ್ರಮುಖ ಸಲಿಂಗಿ ಜೋಡಿಗಳಲ್ಲಿ ಆತಂಕ ಶುರುವಾಗಿದೆ.

ಈ ಕುರಿತು ಭಾರತದ ಖ್ಯಾತ ಸ್ಪ್ರಿಂಟರ್‌ ಹಾಗೂ ಒಲಿಂಪಿಯನ್‌ ದ್ಯುತಿ ಚಂದ್‌ ಬೇಸರ ವ್ಯಕ್ತಪಡಿಸಿದ್ದು, ಸುಪ್ರೀಂ ಕೋರ್ಟ್‌ ತೀರ್ಪು ನನ್ನೆಲ್ಲಾ ಪ್ಲ್ಯಾನ್‌ಗಳನ್ನು ಉಲ್ಟಾ ಮಾಡಿದೆ ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ನಿರಾಕರಿಸಿದೆ.ಇದರಿಂದ ತೀರ್ಪು ನಿರೀಕ್ಷೆಯಲ್ಲಿದ್ದ ದೇಶದ ಪ್ರಮುಖ ಸಲಿಂಗ ಜೋಡಿಗಳಿಗೆ ಇದರಿಂದ ದೊಡ್ಡ ಆಘಾತವಾಗಿದೆ.

ನಾನು ನನ್ನ ಜೊತೆಗಾರ್ತಿ ಮೊನಾಲಿಸಾರನ್ನು ಮದುವೆಯಾಗುವ ಎಲ್ಲಾ ಪ್ಲ್ಯಾನ್‌ ಮಾಡಿದ್ದೆ. ಆದರೆ, ಸುಪ್ರೀಂ ಕೋರ್ಟ್‌ ತೀರ್ಪು ಈ ಪ್ಲ್ಯಾನ್‌ಗಳನ್ನು ಹಾಳು ಮಾಡಿದೆ ಎಂದು ದ್ಯುತಿ ಚಂದ್‌ ಹೇಳಿದ್ದಾರೆ.
ನಾನು ಹಾಗೂ ಮೋನಾಲಿಸಾ ಕಳೆದ ಐದು ವರ್ಷಗಳಿಂದ ಜೊತೆಯಾಗಿ ಬದುಕುತ್ತಿದ್ದೇವೆ. ವಯಸ್ಕರಾರಿಗೂ ನಾವು ತುಂಬಾ ಸಂತೋಷದಿಂದ ಬದುಕುತ್ತಿದ್ದೇವೆ . ನಮ್ಮ ಬದುಕಿನಲ್ಲಿ ನಮ್ಮದೇ ಆದಂಥ ಸ್ವಂಥ ನಿರ್ಧಾರಗಳನ್ನು ಮಾಡಲು ನಾವೀಗ ಶಕ್ತರಾಗಿದ್ದೇವೆ. ಸಲಿಂಗ ವಿವಾಹವನ್ನು ಮಾನ್ಯ ಮಾಡಿ ಸಂಸತ್ತು ಹೊಸ ಕಾನೂನು ಜಾರಿ ಮಾಡಲಿದೆ ಎನ್ನುವ ವಿಶ್ವಾಸ ನಮಗಿದೆ ಎಂದು ದ್ಯುತಿ ತಿಳಿಸಿದ್ದಾರೆ.

2019ರ ಮೇ ತಿಂಗಳಲ್ಲಿ ಭಾರತದಲ್ಲಿ ಮುಕ್ತವಾಗಿ ಹೇಳಿಕೊಂಡ ದೇಶದ ಮೊದಲ ಲೆಸ್ಬಿಯನ್‌ ಅಥ್ಲೀಟ್‌ ಆಗಿ ದ್ಯುತಿ ಚಂದ್‌ ಗುರುತಿಸಿಕೊಂಡರು. ಇದಕ್ಕಾಗಿ ಅವರು ತಮ್ಮ ಕುಟುಂಬದಿಂದ ದೊಡ್ಡ ಮಟ್ಟದ ಟೀಕೆ ಎದುರಿಸಿದ್ದರು.

2021 ರಲ್ಲಿ ಬರ್ಮಿಂಗ್ಹ್ಯಾಮ್‌ನಲ್ಲಿ ಕ್ವೀನ್ಸ್ ಬ್ಯಾಟನ್‌ನಲ್ಲಿ ಭಾಗವಹಿಸಿದ್ದಲ್ಲದೇ, ಕಾಮನ್‌ವೆಲ್ತ್ ದೇಶಗಳಲ್ಲಿ ಹೋಮೋಫೋಬಿಯಾ ಬಗ್ಗೆ ಬೆಳಕು ಚೆಲ್ಲುವ ಅವಕಾಶವನ್ನು ಪಡೆದರು.

2022 ರ ಕಾಮನ್‌ವೆಲ್ತ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ LGBTQIA+ ಧ್ವಜವನ್ನು ಹಿಡಿದಿದ್ದ ದ್ಯುತಿ ಅವರು ಹೋಮೋಫೋಬಿಯಾ ವಿರುದ್ಧ ಪ್ರಬಲ ಸಂದೇಶವನ್ನು ಕಳುಹಿಸಿದ್ದರು.2015 ರಲ್ಲಿ ಸ್ಪೋರ್ಟ್ಸ್ ಆರ್ಬಿಟ್ರೇಷನ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಐಎಎಎಫ್‌ ವಿರುದ್ಧ ದ್ಯುತಿ ಚಂದ್‌ ‘ಲಿಂಗ’ ಪ್ರಕರಣವನ್ನು ಗೆದ್ದಿದ್ದರು. ಒಂದು ವರ್ಷ ಅಮಾನತುಗೊಂಡ ನಂತರ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಲಾಯಿತು.
ಸಿಎಎಸ್‌ ಎರಡು ವರ್ಷಗಳವರೆಗೆ ಐಎಎಎಫ್‌ ನೀತಿಯನ್ನು ಅಮಾನತುಗೊಳಿಸಿತು. ನಂತರ ವಿಶ್ವ ಅಥ್ಲೆಟಿಕ್ಸ್‌ ಸಂಸ್ಥೆಯು ನೀತಿಯನ್ನು ಬದಲಾಯಿಸಿತು, ಇದು ಈಗ 400m ನಿಂದ 1500m ವ್ಯಾಪ್ತಿಯಲ್ಲಿ ಸ್ಪರ್ಧಿಸುವ ಮಹಿಳಾ ಅಥ್ಲೀಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ, 100m ಮತ್ತು 200m ನಲ್ಲಿ ಸ್ಪರ್ಧಿಸುವ ದ್ಯುತಿಯನ್ನು ತನ್ನ ವ್ಯಾಪ್ತಿಯಿಂದ ಹೊರಗಿಟ್ಟಿತು.

ಮೊನಾಲಿಸಾ ಕುರಿತು ಹೇಳುದಾದರೆ , ತನ್ನ ಗ್ರಾಮದಲ್ಲಿ ಖುದುರ್ಕುನಿ ಪೂಜೆಯ ಸಮಯದಲ್ಲಿ ದ್ಯುತಿ ಚಂದ್‌ರನ್ನು ಮೊದಲು ಭೇಟಿಯಾಗಿದ್ದರು ಮತ್ತು ಬಿಎ ಪದವಿಯನ್ನು ಪೂರ್ಣಗೊಳಿಸಿದ ನಂತರ ದಂಪತಿಗಳು ಒಟ್ಟಿಗೆ ವಾಸ ಮಾಡಲು ಆರಂಭಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!