ಅಂದಿನ ಪ್ರಧಾನಿಗಳು ಕಚ್ಚತೀವು ದ್ವೀಪವನ್ನು ಚಿಕ್ಕ ಬಂಡೆ ಎಂದು ಕರೆದು ಅಸಡ್ಡೆ ಮಾಡಿದ್ದರು: ಜೈಶಂಕರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾನೂನಾತ್ಮಕ ಅಭಿಪ್ರಾಯಗಳ ಹೊರತಾಗಿಯೂ ದೇಶವನ್ನಾಳುತ್ತಿದ್ದ ಕಾಂಗ್ರೆಸ್ ಪ್ರಧಾನಿಗಳಿಗೆ ಕಚ್ಚತೀವು ದ್ವೀಪದ ಬಗ್ಗೆ ಅಸಡ್ಡೆ ಇತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 1974ರ ಶ್ರೀಲಂಕಾಕ್ಕೆ ಸಮುದ್ರ ಗಡಿ ಒಪ್ಪಂದದ ಭಾಗವಾಗಿ ನೀಡಲಾದ ಕಚ್ಚತೀವುವನ್ನು ಜವಾಹರಲಾಲ್ ನೆಹರು, ಇಂದಿರಾಗಾಂಧಿಯಂತಹ ಪ್ರಧಾನ ಮಂತ್ರಿಗಳು ಚಿಕ್ಕ ಬಂಡೆ ಎಂದು ಕರೆದಿದ್ದರು.

ಅಲ್ಲದೆ 1974 ರಲ್ಲಿ ಭಾರತ – ಶ್ರೀಲಂಕಾ ನಡುವೆ ಮೊದಲು ಏರ್ಪಟ್ಟ ಒಪ್ಪಂದದ ಬಗ್ಗೆ ಆಗಿನ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರಿಗೆ ಕೂಡಾ ಸಂಪೂರ್ಣ ಮಾಹಿತಿ ನೀಡಲಾಗಿತ್ತು ಎಂದು ಅವರು ಹೇಳಿದರು. ಆದರೂ ಕಾಂಗ್ರೆಸ್ ಹಾಗೂ ಡಿಎಂಕೆ ಈ ವಿಚಾರದಲ್ಲಿ ತಾವು ಯಾವುದೇ ಹೊಣೆಗಾರಿಕೆ ಹೊರುವುದಿಲ್ಲ ಎಂಬಂತೆ ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸಿದವು, 1974ರಲ್ಲಿ ಹಾಗೂ ಅದರ ಬಳಿಕದ ಈ ಪರಿಸ್ಥಿತಿಯನ್ನು ಸೃಷ್ಟಿಸಲು ಡಿಎಂಕೆ ಕಾಂಗ್ರೆಸ್‌ನೊಂದಿಗೆ ಸೇರಿಕೊಂಡಿತ್ತು ಎಂದು ಆವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!