ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರಿನ ತರೀಕೆರೆಯ ಭದ್ರಾ ಡ್ಯಾಂ ಪಕ್ಕದ ಕಾಲುವೆಯಲ್ಲಿ ಆಟವಾಡುವಾಗ ಆಯತಪ್ಪಿ ಬಿದ್ದು ಮೂವರು ಮೃತಪಟ್ಟಿದ್ದಾರೆ.
ರವಿ, ಅನನ್ಯ ಹಾಗೂ ಶಾಮವೇಣಿ ಮೃತರು. ಲಕ್ಕವಳ್ಳಿಯ ನಿವಾಸಿಯಾದ ರವಿ ತಮ್ಮ ಸಹೋದರಿಯ ಮಕ್ಕಳಾದ ಅನನ್ಯ ಹಾಗೂ ಶಾಮವೇಣಿಯನ್ನು ಆಟ ಆಡಿಸಲು ಕಾಲುವೆ ಬಳಿ ಕರೆದುಕೊಂಡು ಬಂದಿದ್ದರು.
ರವಿ ಮೃತದೇಹ ಪತ್ತೆಯಾಗಿದ್ದು, ಇಬ್ಬರು ಯುವತಿಯರ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.