ಹೊಸದಿಗಂತ ವರದಿ, ರಾಯಚೂರು:
ಜಗತ್ತಿಗೆ ಉಗ್ರವಾದ ಎನ್ನುವುದು ಕಂಟಕವಾದುದು. ಪ್ರಸಕ್ತ ಉಗ್ರವಾದವನ್ನು ಮಟ್ಟ ಹಾಕುವುದು ಬಹಳ ಮುಖ್ಯವಾಗಿದೆ ಎಂದು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಶುಕ್ರವಾರ ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ, ಜಗತ್ತಿಗೆ ಭಯೋತ್ಪಾದನೆ ಬೇಕಾಗಿಲ್ಲ. ಜಗತ್ತಿನಲ್ಲಿ ಉಗ್ರತ್ವ ನಿರ್ಮೂಲನೆ ಬಹಳ ಅಗತ್ಯವಾಗಿದೆ ಎಂದರು.
ಪಹಲ್ಗಾಮ್ ದಾಳಿಯನ್ನು ಜಗತ್ತಿನ ಬಹುತೇಕ ರಾಷ್ಟ್ರಗಳು ಅಮಾನವೀಯ ಎಂದು ಖಂಡಿಸಿವೆ. ಇದು ಖಂಡನೀಯ ಕೃತ್ಯ. ರಾಷ್ಟ್ರದ ಹಿತ ದೃಷ್ಟಿಯಿಂದ ಎಲ್ಲ ಪಕ್ಷಗಳು ತಮ್ಮ ಪಕ್ಷದ ಭಾವನೆಗಳನ್ನು ಬದಿಗಿರಿಸಿ ಪ್ರಧಾನಮಂತ್ರಿಗಳು ಕೈಗೊಳ್ಳುವ ನಿರ್ಣಯಗಳಿಗೆ ಬದ್ದರಾಗಿರುವುದಾಗಿ ಒಗ್ಗಟ್ಟನ್ನು ತಿಳಿದ್ದಾರೆ ಇದು ಒಳ್ಳೆಯ ನಿರ್ಣಯವಾಗಿದೆ ಎಂದರು.
ಉಗ್ರವಾದ ನಿರ್ಮೂಲನೆಗೆ ಕ್ರಮ ಕೈಗೊಳ್ಳುವುದಕ್ಕೆ ಮೂರು ಸೇನಾ ಮುಖ್ಯಸ್ಥರೊಂದಿಗೆ ಪ್ರಧಾನಮಂತ್ರಿಗಳು ಸೇರಿದಂತೆ ಇತರರು ಸಭೆ ನಡೆಸಿದ್ದಾರೆ. ಅವರು ತೆಗೆದುಕೊಳ್ಳುವ ನಿರ್ಣಯಗಳಿಗೆ ಎಲ್ಲರೂ ಬದ್ದರಾಗಿರುವದಾಗಿ ತಿಳಿಸಿದ್ದಾರೆ. ಇದು ದೇಶದ ಭದ್ರತೆ ಹಿತಕ್ಕೆ ಪೂರಕವಾದುದು ಎಂದು ತಿಳಿಸಿದರು.
ಉಗ್ರತ್ವ ಯಾವ ದೇಶಕ್ಕೂ ಬೇಕಾಗಿಲ್ಲ. ಉಗ್ರವಾದದ ವೈರುತ್ಯ ಇರುವ ಎಲ್ಲ ರಾಷ್ಟ್ರಗಳು, ಶಕ್ತಿಗಳು ಒಂದಾಗಿ. ಜಾಗತಿಕ ಶಕ್ತಿಗಳನ್ನು ಬಳಸಿ, ಉಗ್ರರ ತಾಣಗಳನ್ನು ಗುರುತಿಸಿ ಅವುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದರು.
ಭಾರತೀಯರೆಲ್ಲರ ಉದ್ದೇಶವೇ ಉಗ್ರವಾದ ನಿರ್ಮೂಲನೆ ಆಗಬೇಕೆನ್ನುವುದು. ಕೇಂದ್ರ ಸರ್ಕಾರ ಕೈಗೊಳ್ಳು ನಿರ್ಣಯಗಳಿಗೆ ಇಡೀ ದೇಶವೇ ಅವರ ಬೆಂಬಲಿಸಿದೆ. ಕೇಂದ್ರ ಸರ್ಕಾರ ಈ ಸಮಯದಲ್ಲಿ ಸೈನ್ಯಗಳಿಗೆ ಉತ್ತಮ ಮಾರ್ಗದರ್ಶನ ಮಾಡಬೇಕು ಎಂದರು.