ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಡುಗನ ನಡತೆ ಇಷ್ಟವಾಗಿಲ್ಲ, ಮದುವೆಯಾಗೋದಿಲ್ಲ ಎಂದು ಯುವತಿ ರಿಜೆಕ್ಟ್ ಮಾಡಿದ್ದಕ್ಕೆ ಸಿಟ್ಟಿಗೆದ್ದ ಯುವಕ ಯುವತಿಯ ತಂದೆಯ ಮೇಲೆ ಸೇಡು ತೀರಿಸಿಕೊಂಡಿದ್ದಾನೆ.
ಮೈಸೂರಿನ ಹುಣಸೂರು ತಾಲೂಕಿನ ಮನುಗನಹಳ್ಳಿಯಲ್ಲಿ ಯುವಕ ಅಶೋಕ್ ಜತೆ ವೆಂಕಟೇಶ್ ಅವರ ಮಗಳ ಮದುವೆ ಮಾಡುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಮದುವೆಗೆ ಯುವತಿ ಒಪ್ಪಿಲ್ಲ. ಇದರಿಂದಾಗಿ ಅಶೋಕ್ ವೆಂಕಟೇಶ್ ಕುಟುಂಬದ ಮೇಲೆ ದ್ವೇಷ ಇಟ್ಟುಕೊಂಡಿದ್ದ.
ಸಿಟ್ಟಿನಲ್ಲಿ ರಾತ್ರೋರಾತ್ರಿ 850 ಅಡಕೆ ಗಿಡಗಳನ್ನು ನಾಶ ಮಾಡಿದ್ದಾರೆ ಎಂದು ವೆಂಕಟೇಶ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿಂದೆಯೂ ಶುಂಠಿ ಬೆಳೆಯನ್ನು ನಾಶ ಮಾಡಿದ್ದರು, ಇದೀಗ ಅಡಕೆ ಬೆಳೆಯೂ ನಾಶವಾಗಿದೆ ಎಂದು ಹೇಳಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.