ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಷ್ಟವಿಲ್ಲದ ಮದುವೆಯಿಂದ ಬೇಸತ್ತಿದ್ದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದು, ಬಸ್ನಲ್ಲಿ ಪರ್ಸ್ ಬಿಟ್ಟು ಹೋಗಿದ್ದಾಳೆ.
ಪರ್ಸ್ ತೆಗೆದು ನೋಡಿದ ಕಂಡಕ್ಟರ್ಗೆ ಡೆತ್ನೋಟ್ ಸಿಕ್ಕಿದ್ದು, ಯುವತಿಯ ಪ್ರಾಣ ಉಳಿಸಿದ್ದಾರೆ. ತೆಲಂಗಾಣದ ನಾರಾಯಣಖೇಡ್ನ ಪಟಂಚೇರು ಗ್ರಾಮದಲ್ಲಿ ಸರ್ಕಾರಿ ಬಸ್ ಹತ್ತಿದ್ದ ಯುವತಿ ಸೀಟ್ ಮೇಲೆಯೇ ಪರ್ಸ್ ಬಿಟ್ಟು ಇಳಿದಿದ್ದಾಳೆ.
ಪರ್ಸ್ನಲ್ಲಿ ಆಧಾರ್ ಕಾರ್ಡ್, ಹಣ ಹಾಗೂ ಚೀಟಿಯೊಂದು ಕಾಣಿಸಿದೆ. ಮನೆಯ ಅಡ್ರೆಸ್ ಇರಬಹುದೇ ಎಂದು ಕಂಡಕ್ಟರ್ ಚೀಟಿ ತೆಗೆದಿದ್ದು, ಚೀಟಿಯಲ್ಲಿ ಇಷ್ಟವಿಲ್ಲದ ಹುಡುಗನ ಜೊತೆ ಮದುವೆ ಮಾಡಿಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಬರೆದಿದ್ದಾಳೆ.
ಈ ಚೀಟಿ ಬಗ್ಗೆ ಎಂಡಿಗೆ ಕಂಡಕ್ಟರ್ ತಿಳಿಸಿದ್ದು, ಆಧಾರ್ ನಂಬರ್ ಹಾಗೂ ಚೀಟಿಯನ್ನು ಕಳುಹಿಸಿದ್ದಾರೆ. ಬಳಿಕ ಎಂಡಿ ಈ ಯುವತಿಯನ್ನು ಪತ್ತೆ ಹಚ್ಚಲು ಸೂಚಿಸಿದ್ದಾರೆ. ಈ ಯುವತಿಯನ್ನು ಹುಡುಕಿದ್ದು, ಪೊಲೀಸರ ನೆರವಿನಿಂದ ಮದುವೆ ನಿಲ್ಲಿಸಲಾಗಿದೆ. ಪೋಷಕರಿಗೆ ಮಗಳ ಡೆತ್ನೋಟ್ ಬಗ್ಗೆ ತಿಳಿಸಿದ್ದು, ಮದುವೆ ಮಾಡುವುದಿಲ್ಲ ಎಂದು ಪೋಷಕರು ಹೇಳಿದ್ದಾರೆ.