ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದಾಶಿವನಗರದ ಕೀರ್ತಿವರ್ಧನ್ ಎನ್ನುವವರ ಮನೆಯಲ್ಲಿ ಮನೆಕೆಲಸದಾಕೆಯೇ 10 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.
ಮನೆ ಮಾಲೀಕರು ಕುಟುಂಬ ಸಮೇತ ವಿದೇಶಕ್ಕೆ ತೆರಳಿದ್ದಾಗ, ಮೂರು ವರ್ಷದಿಂದ ಮನೆಕೆಲಸ ಮಾಡುತ್ತಿದ್ದ ಶಾಂತ ಚಿನ್ನಾಭರಣ ಅಪಹರಿಸಿದ್ದಾರೆ. ನಂತರ ನಾನು ಮನೆಯಲ್ಲಿದ್ದ ವೇಳೆ ಕಳ್ಳರು ಬಂದು ನನಗೆ ಹೊಡೆದು ಚಿನ್ನ ಕದ್ದೊಯ್ದರು ಎಂದು ಶಾಂತ ಕಥೆ ಕಟ್ಟಿದ್ದಾಳೆ.
ಮನೆಕೆಲಸದವಳನ್ನು ನಂಬಿದ ಮನೆಯವರು ಸದಾಶಿವನಗರ ಠಾಣೆಗೆ ದೂರು ನೀಡಿ ಕಳ್ಳರನ್ನು ಹುಡುಕುವಂತೆ ಹೇಳಿದ್ದಾರೆ. ವಿಚಾರಣೆ ವೇಳೆ ಮನೆಕೆಲಸದವಳೇ ಕಳ್ಳಿ ಎಂದು ಗೊತ್ತಾಗಿದೆ. ಶಾಂತಾ ಮನೆಯಿಂದ ಚಿನ್ನಾಭರಣವನ್ನು ಕೀರ್ತಿವರ್ಧನ್ ಕುಟುಂಬಕ್ಕೆ ಕೊಡಿಸಲಾಗಿದೆ.