ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಪ್ರಶ್ನೆಯೇ ಇಲ್ಲ : ವಿ.ಸೋಮಣ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚುನಾವಣೆಯಲ್ಲಿ ಸೋತ ತಕ್ಷಣ ಎಲ್ಲವೂ ಮುಗಿದು ಹೋಯಿತೆಂದಿಲ್ಲ. ರಾಜಕೀಯ ನಿವೃತ್ತಿ ಪ್ರಶ್ನೆಯೇ ಇಲ್ಲ. ರಾಜಕೀಯ ನಿವೃತ್ತಿ ಎಂಬುದೊಂದು ದೊಡ್ಡ ನಾಟಕವಷ್ಟೇ ಎಂದು ಮಾಜಿ ಸಚಿವ ವಿ.ಸೋಮಣ್ಣ ವ್ಯಂಗ್ಯ ಮಾಡಿದರು.

ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಪಕ್ಷದ ಆದೇಶದಂತೆ ಚಿನ್ನದಂತಹ ಕ್ಷೇತ್ರ ಬಿಡಬೇಕಾಯಿತು. ಸೋಲು, ಗೆಲುವು, ಕ್ಷೇತ್ರಕ್ಕಿಂತ ಪಕ್ಷ ಮುಖ್ಯವಾಗಿದೆ. ವರಿಷ್ಠರ ಸೂಚನೆಯನ್ನು ಪಾಲಿಸಿರುವೆ. ಪ್ರಧಾನಿ ನರೇಂದ್ರ ಮೋದಿಯವರ ಕೆಲಸಗಳು ಅವಿಸ್ಮರಣೀಯ ಎಂದು ಹೇಳಿದರು.

ಚುನಾವಣೆಯಲ್ಲಿ ಯಡಿಯೂರಪ್ಪ ಫ್ಯಾಕ್ಟರ್ ವರ್ಕ್ ಆಗಿರುವುದು ಗೊತ್ತಿಲ್ಲ. ಹಾಗಂತ ಅವರು ಎಲ್ಲಿಯಾದರೂ ಹೇಳಿದ್ದಾರೆಯೆ? ಕಾಂಗ್ರೆಸ್​ನ ಗ್ಯಾರಂಟಿಗಳೇ ಸೋಲಿಗೆ ಕಾರಣ. ವೀರಶೈವ-ಲಿಂಗಾಯತ ಸಮುದಾಯದ ಮತಗಳ ವಿಭಜನೆ ಆಗಿದ್ದೇಕೆ? ಎನ್ನುವುದನ್ನು ಹಿರಿಯ ನಾಯಕ ಯಡಿಯೂರಪ್ಪ ಅವರನ್ನೇ ಕೇಳಿ. ನಾನು ಕಿರಿಯ, ಕ್ಷೇತ್ರಕ್ಕೆ ಸೀಮಿತವೆಂದು ವಿ.ಸೋಮಣ್ಣ ಮಾತನಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!