ಹೊಸದಿಗಂತ ವರದಿ, ಬಳ್ಳಾರಿ:
ನಗರದ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ವ್ಯಕ್ತಿಯಲ್ಲ ಈ ಭಾಗದ ಶಕ್ತಿಯಾಗಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಕಾಂಗ್ರೆಸ್ ಸೇರ್ಡಪೆ ಕುರಿತು ಪ್ರತಿಕ್ರೀಯಿಸಿದ ಅವರು, ಶಾಸಕ ಸೋಮಶೇಖರ್ ರೆಡ್ಡಿ ಅವರು ಕಾಂಗ್ರೆಸ್ ಸೇರ್ಪಡೆ ವಿಚಾರ ಹಾಸ್ಯಾಸ್ಪದವಾಗಿದೆ. ಇದು ವದಂತಿ ಅಷ್ಟೇ, ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಮಾತನಾಡುವ ವೇಳೆ ಸೇರ್ಪಡೆ ಕುರಿತು ಮಾತನಾಡಿದ್ದಾರೆ, ಎಂಬುದು ಶುದ್ದ ಸುಳ್ಳು, ನಾಯಕರೊಂದಿಗೆ ಮಾತನಾಡಿರುವ ವೇಳೆ ಸೀರಿಯಸ್ ಆಗಿ ಮಾತನಾಡಿಲ್ಲ, ಕಾಂಗ್ರೆಸ್ ನ ಕೆಲ ಶಾಸಕರೂ ನನ್ನ ಜೊತೆ ಇರ್ತೇವೆ ಅಂತಾರೆ, ಮಾಜಿ ಸಿ.ಎಂ.ಸಿದ್ದರಾಮಯ್ಯ ಅವರೂ ಸಾಕಷ್ಟು ಬಾರಿ ಹೇಳಿದ್ದಾರೆ, ಶಾಸಕ ಸೋಮಶೇಖರ್ ರೆಡ್ಡಿ ಅವರು ಈ ಭಾಗದ ಶಕ್ತಿಯಾಗಿದ್ದಾರೆ, ರೆಡ್ಡಿ ಅವರು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ಎಂದರು.
ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಮಾತನಾಡಿ, ಕಾಂಗ್ರೆಸ್ ಸೇರ್ಪಡೆ ವದಂತಿ ಅಷ್ಟೇ, ನಾನು ರಾಜಕೀಯದಲ್ಲಿ ಇರುವವರೆಗೂ ಬಿಜೆಪಿಯಲ್ಲೇ ಇರುವೆ, ಇದರಲ್ಲಿ ಅನುಮಾನ ಬೇಡ, ರಾಜಕೀಯ ಬೇಡವೆಂದಾಗ ಮನೆಯಲ್ಲೇ ಇರುವೆ ಹೊರತು, ಬೇರೆಯವರ ಬಾಗಿಲು ಬಡಿಯೋಲ್ಲ, ನನ್ನ ಕೊನೆ ಉಸಿರು ಇರುವರೆಗೂ ಬಿಜೆಪಿಯಲ್ಲೇ ಇರುವೆ, ನನ್ನ ಫೈಲ್ ಹುಡುಕಲು ಹೋಗಿದ್ದೆ, ಅಲ್ಲಿ ಸಿದ್ದರಾಮಯ್ಯ ಅವರು ಭೇಟಿ ಆದ್ರು, ಅಷ್ಟೇ, ಅಲ್ಲಿನಡೆದ ಚೆರ್ಚೆಗೆ ಮಹತ್ವ ನೀಡುವುದು ಸರಿಯಲ್ಲ, ಶಾಸಕ ನಾಗೇಂದ್ರ ಅವರು ಕಾಂಗ್ರೆಸ್ ಗೆ ಬರತೀರಾ ಅಂದ್ರು, ಬರತೇನೆ ಅಂದೆ, ಕಾಂಗ್ರೆಸ್ ಸೇರ್ಪಡೆ ಆಗುವೆ ಎಂದು ಹೇಳಿಲ್ಲ, ಕಾಂಗ್ರೆಸ್ ಹೈಕಮಾಂಡ್ ನಮ್ಮ ಕುಟುಂಬಕ್ಕೆ ಕೊಟ್ಟ ಕಷ್ಟಗಳನ್ನು ಇನ್ನೂ ಮರೆತಿಲ್ಲ, ಕಾಂಗ್ರೆಸ್ ನವರು ಕೊಟ್ಟ ಕಷ್ಟಗಳನ್ನು ಅನುಭವಿಸಿದ್ದೇವೆ, ಇಷ್ಟೆಲ್ಲ ಅನುಭವಿಸಿದ ನಾವು ಮತ್ತೆ ಕಾಂಗ್ರೆಸ್ ಗೆ ಹೋಗ್ತೇವೆ ಅಂದ್ರೇ ನಮ್ಮಷ್ಟು ದಡ್ಡರು ಯಾರೂ ಇರಲ್ಲ ಎಂದರು. ಈ ಸಂದರ್ಭದಲ್ಲಿ ಬೂಡಾ ಅಧ್ಯಕ್ಷ ಕಾರ್ಕಲತೋಟ ಪಾಲನ್ನ ಸೇರಿ ವಿವಿಧ ಮುಖಂಡರು ಇದ್ದರು.