ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ನೀವೆಲ್ಲ ಸಣ್ಣವರಿದ್ದಾಗ ಎಲ್ಲಿಗೆ ಟ್ರಿಪ್ ಹೋಗಿದ್ದೀವಿ ನೆನಪಿದ್ಯಾ? ಬೇರೆ ಊರಿನವರಾದ್ರೆ ಬೆಂಗಳೂರಿಗೆ, ಮೈಸೂರಿಗೆ ಹೆಚ್ಚೆಂದರೆ ಮಡಿಕೇರಿಗೆ ಕರೆದುಕೊಂಡು ಹೋಗಿರಬಹುದು.
ಆದರೆ ಮಹಾರಾಷ್ಟ್ರದ ಸರ್ಕಾರಿ ಶಾಲೆ ಮಕ್ಕಳು ವಿಮಾನದಲ್ಲಿ ದೆಹಲಿಗೆ ಹಾರಿದ್ದಾರೆ. ಹೌದು, ಅಕ್ಕಲಕೋಟೆಯ ಮೈಂದರ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಹೆಡ್ಮಾಸ್ಟರ್ ವಿಮಾನದಲ್ಲಿ ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ.
ಮುಖ್ಯೋಪಾಧ್ಯಾಯರಾದ ಮಹಾಂತೇಶ್ವರ ಕಟ್ಟಿಮನಿ ಮಕ್ಕಳಿಂದ ಸ್ವಲ್ಪ ಹಣ ಸಂಗ್ರಹಿಸಿ, ಉಳಿದ ಹಣವನ್ನು ತಾವು ಹಾಕಿ ಟ್ರಿಪ್ ಕರೆದುಕೊಂಡು ಹೋಗಿದ್ದಾರೆ. ಸಂಸತ್ ಭವನ, ಕೆಂಪುಕೋಟೆ, ರಾಷ್ಟ್ರಪತಿ ಭವನ ಹಾಗೂ ಇಂಡಿಯಾ ಗೇಟ್ ನೋಡಿ ಮಕ್ಕಳು ಖುಷಿಪಟ್ಟಿದ್ದಾರೆ.