ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂತಾರ ಸಿನಿಮಾ ಎಲ್ಲ ರೆಕಾರ್ಡ್ಗಳನ್ನು ಮುರಿದು ಮುನ್ನುಗ್ಗುತ್ತಿದೆ. ರಜನಿಕಾಂತ್, ಶಿಲ್ಪಾ ಶೆಟ್ಟಿ, ಕಂಗನಾ ರಣೌತ್ ಹೀಗೆ ಹಲವು ಸ್ಟಾರ್ಸ್, ನಿರ್ದೇಶಕರು ಸಿನಿಮಾ ಮೆಚ್ಚಿ ಕೊಂಡಾಡಿದ್ದಾರೆ.
ಆದರೆ ನಿರ್ದೇಶಕ ಅಭಿರೂಪ್ ಬಸು ಕಾಂತಾರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಿನಿಮಾ ನಮ್ಮ ಜನರ ಬುದ್ಧಿವಂತಿಕೆಯನ್ನು ಅಣಕಿಸುವಂತಿದೆ ಎಂದು ಅಭಿರೂಪ್ ಹೇಳಿದ್ದಾರೆ.
ಕಳಪೆ ಚಿತ್ರ, ಪ್ರಗತಿಪರವಲ್ಲದ ಕಥೆ, ತಿರುವುಗಳು ಅಪ್ರಾಮಾಣಿಕ. ಸಿನಿಮಾ ಬರೀ ಗಿಮಿಕ್, ಕ್ಲೈಮಾಕ್ಸ್ ಬಗ್ಗೆ ಆಸಕ್ತಿಯೇ ಇಲ್ಲ. ಹೆಚ್ಚು ಹೈಪ್ ಸಿಕ್ಕ ಸಿನಿಮಾ ಕಾಂತಾರ ಎಂದು ಹೇಳಿದ್ದಾರೆ.