ಹಿಂದೂ ಹಿತಕ್ಕಾಗಿ ಕೆಲಸ ಮಾಡುವರೋ ಅವರು ದೇಶದಲ್ಲೇ ರಾಯಭಾರ ಮಾಡುತ್ತಾರೆ: ಶ್ರೀ ಸಿದ್ದಲಿಂಗ ಮಹಾಸ್ವಾಮಿ

ಹೊಸ ದಿಗಂತ ವರದಿ, ಕಲಬುರಗಿ:

ದೇಶದ ಹಿತಕ್ಕಾಗಿ,ಹಿಂದೂ ಧರ್ಮದ ಹಿತಕ್ಕಾಗಿ ಯಾರು ನಿಷ್ಠೆಯಿಂದ ಕೆಲಸ ಮಾಡುವರೋ,ಅವರೇ ಇಡೀ ದೇಶದಲ್ಲಿ ರಾಯಭಾರ ಮಾಡುತ್ತಾರೆ ಎಂದು ಶ್ರೀ ರಾಮ ಸೇನೆಯ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

ಶನಿವಾರ ಜಿಲ್ಲೆಯ ಆಳಂದ ಪಟ್ಟಣದ ಚೆಕ್ ಪೋಸ್ಟ್ ಬಳಿ ಶಿವಲಿಂಗ ಪೂಜೆಗೆ ತೆರಳುವ ಮುನ್ನ ಮಹಾ ಶಿವರಾತ್ರಿ ಸಂಗಮ ಕಾಯ೯ಕ್ರಮದ ಬಹಿರಂಗ ಸಭೆಯಲ್ಲಿ ಮಾತನಾಡಿ,ಕಳೆದ ಬಾರಿ ಪೂಜೆಗೆ ಕಲಬುರಗಿ ಜಿಲ್ಲಾಡಳಿತ ಅವಕಾಶ ನೀಡಲಿಲ್ಲ.ಹಾಗೇ ಇಲ್ಲಿನ ಬಾಬರ್,ನ ಸಂತತಿಗಳು, ಟಿಪ್ಪುವಿನ ಮೊಮ್ಮಕ್ಕಳು ಪೂಜೆಗೆ ಅವಕಾಶ ಕೊಡಲಿಲ್ಲ ಹೀಗಾಗಿ ಕಳೆದ ವರ್ಷ ಪೂಜೆಗೆ ತೆರಳುತ್ತಿದ್ದ ನಮ್ಮನ್ನು ಬಂಧಿಸಲಾಯಿತು. ಕೆಲವು ಕಿಡಿಗೇಡಿಗಳು ನಮ್ಮ ಮೇಲೆ ಹಾಗೂ ಆರಕ್ಷಕರ ಮೇಲೆ ಕಲ್ಲೂ ತೂರಾಟ ಮಾಡಿದರು.ಆದರೂ ನಾವು ಕಳೆದ ವರ್ಷ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ ಬಂದಿದ್ದೇವೆ ಎಂದರು.

ಇದೀಗ ಜಿಲ್ಲೆಯ ವಕ್ಫ್ ನ್ಯಾಯಾಲಯವು ಪೂಜೆಗೆ ೧೫ ಜನರಿಗೆ ಅವಕಾಶ ಕಲ್ಪಿಸಿ ಕೋಟ್ಯಂತರ ಹಿಂದುಗಳು ಭಾವನೆಗೆ ಸ್ಪಂಧಿಸಿದೆ.ಹೀಗಾಗಿ ಇಂದು ನಾವು ನ್ಯಾಯಾಲಯದ ಆದೇಶದಂತೆ ಹದಿನೈದು ಜನರ ತಂಡ ಪೂಜೆಗೆ ತೆರಳಲಿದ್ದೇವೆ ಎಂದರು.

ಮುಂದಿನ ದಿನಗಳಲ್ಲಿ ಕೋಟ್೯ ಮೂಲಕವೇ ಹೋರಾಟ ಮಾಡಿ, ಶಿವಲಿಂಗ ಸ್ಥಳದಲ್ಲೇ ಭವ್ಯವಾದ ಶಿವನ ಮಂದಿರವನ್ನು ಕಟ್ಟಲಿದ್ದೇವೆ ಎಂದು ನುಡಿದರು.

ದತ್ತ ಪೀಠದ ಮಾದರಿಯಲ್ಲಿ ಸಾವಿರಾರು ಜನರೊಂದಿಗೆ ಮುಂದಿನ ವಷ೯, ಪೂಜೆಗೆ ತೆರಳುವುದು ಖಚಿತ.ಅಲ್ಲಿ ರಾಘವ ಚೈತನ್ಯ ರಥ ಗುಡಿ ಕಟ್ಟಿಸಿ ಗಂಟೆ ಭಾರಿಸದಿದ್ದರೇ,ನಾವು ಹಿಂದೂಗಳೇ ಅಲ್ಲ ಎಂದರು.ಇದಕ್ಕೂ ಮುನ್ನ ಕಲಬುರಗಿ ನಗರದ ರಾಮ ಮಂದಿರದಿಂದ ಶ್ರೀ ರಾಮ ಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ೧೫ ಜನ ಹಿಂದೂಗಳು ಆಳಂದ ಕಡೆ ತೆರಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!