ಚಿನ್ನ ಬೆಳ್ಳಿ ಬೇಡ ಎಂದು ಕೂದಲಿನ ಮೇಲೆ ಕಣ್ಣು ಹಾಕಿದ ಕಳ್ಳ, 25 ಲಕ್ಷ ರೂ. ಮೌಲ್ಯದ ಕೇಶ ಕಳವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿನ್ನ ಬೆಳ್ಳಿ ಬೇಡ ಎಂದು ಕೂದಲಿನ ಮೇಲೆ ಕಳ್ಳನೊಬ್ಬ ಕಣ್ಣು ಹಾಕಿದ್ದು, ಬರೋಬ್ಬರಿ 400 ಕೆಜಿ ಕೂದಲನ್ನು ಕದ್ದಿದ್ದಾನೆ.

ಬೆಂಗಳೂರಿನ  ಸೋಲದೇವನಹಳ್ಳಿಯ ಲಕ್ಷ್ಮೀಪುರ ಕ್ರಾಸ್‌ನಲ್ಲಿ ಕಳ್ಳತನ ನಡೆದಿದ್ದು, ಆರೋಪಿ ಯಲ್ಲಪ್ಪ ಸೇರಿದಂತೆ ಐದು ಜನರ ತಂಡ ಗೋದಾಮಿನ ಬೀಗ ಮುರಿದು ಕೂದಲನ್ನು ಕದ್ದಿದ್ದರು. ಗೂಡ್ಸ್ ವಾಹನದ ಮೂಲಕ ಸುಮಾರು 25 ಲಕ್ಷ ರೂ. ಬೆಲೆಬಾಳುವ 400 ಕೆ.ಜಿ ಕೂದಲನ್ನು ಕದ್ದು ಪರಾರಿಯಾಗಿದ್ದರು.

ಈ ಕುರಿತು ಗೋದಾಮಿನ ಮಾಲೀಕ ವೆಂಕಟರಮಣ ಕಳ್ಳತನ ಕುರಿತು ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದು, ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ತನಿಖೆ ವೇಳೆ ಆರೋಪಿಗಳು ಕದ್ದ ಕೂದಲನ್ನು ಚನ್ನರಾಯಪಟ್ಟಣ ಹಾಗೂ ಆಂಧ್ರಗೆ ಸಾಗಿಸಿರುವುದಾಗಿ ತಿಳಿದು ಬಂದಿದೆ. ಅಲ್ಲದೇ ಕೂದಲನ್ನು ಚೀನಾ, ಬರ್ಮಾ ಮತ್ತು ಹಾಂಕಾಂಗ್‌ಗೆ ರಫ್ತು ಮಾಡಬೇಕಾಗಿತ್ತು ಎನ್ನೋದು ಗೊತ್ತಾಗಿದೆ.

ಸದ್ಯ ಐದು ಜನರ ಪೈಕಿ ಯಲ್ಲಪ್ಪ ಪೊಲೀಸರು ಬಲೆಗೆ ಬಿದ್ದಿದ್ದು, ಉಳಿದ ನಾಲ್ಕು ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!