ಯಲ್ಲಾಪುರದ ಹೊರಮನೆಯಲ್ಲಿ ಜೇನುಗೂಡು ಹಾಳುಮಾಡಿ ಜೇನು ಕದ್ದ ಕಳ್ಳರು

ಹೊಸದಿಗಂತ ವರದಿ ಯಲ್ಲಾಪುರ:

ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಹೊರಮನೆ ನಾರಾಯಣ ಮಾಬ್ಲೇಶ್ವರ ಭಟ್ಟ ಎನ್ನುವವರಿಗೆ ಸೇರಿದ ಜೇನುಪೆಟ್ಟಿಗೆಗಳನ್ನು ಹಾಳು ಮಾಡಿ ಜೇನು ಕದ್ದೊಯ್ದ ಘಟನೆ ಶನಿವಾರ ರಾತ್ರಿ ನಡೆದಿದೆ.

ಹೊರಮನೆಯ ನಾರಾಯಣ ಮಾಬ್ಲೇಶ್ವರ ಭಟ್ಟ ಅವರು ತಮ್ಮ ಮನೆಯ ಅಕ್ಕಪಕ್ಕ ಮತ್ತು ತಮ್ಮದೇ ಅಡಿಕೆ ತೋಟದಲ್ಲಿ, ಹದಿನೆಂಟು ಜೇನುಗೂಡುಗಳನ್ನು ಇರಿಸಿದ್ದರು. ಅವುಗಳಲ್ಲಿ ಎಂಟು ಜೇನುಪೆಟ್ಟಿಗೆಗಳನ್ನು ಶನಿವಾರ ರಾತ್ರಿ ಬಂದ ಕಳ್ಳರು ಮುಚ್ಚಳ ಕಿತ್ತು, ಪ್ರೇಮುಗಳನ್ನು ಹೊರಗೆಸೆದು ಜೇನುತುಪ್ಪ ಕದ್ದೊಯ್ದಿದ್ದಾರೆ.

ಇದರಿಂದಾಗಿ ಭಟ್ಟರ ಜೇನುಗೂಡುಗಳಿಗೆ ಬಹಳ ಹಾನಿಯಾಗಿದ್ದು, ಗ್ರಾ.ಪಂ.ಸದಸ್ಯ ಕುಪ್ಪಯ್ಯ ಪೂಜಾರಿ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಜೊತೆಗೆ ಮಂಚೀಕೇರಿ ಉಪ ಪೋಲೀಸ್ ಠಾಣೆಯ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!