ಹೊಸದಿಗಂತ ಡಿಜಿಟಲ್ ಡೆಸ್ಕ್ :
ಅನಾರೋಗ್ಯದಿಂದ ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಸಾಲು ಮರದ ತಿಮ್ಮಕ್ಕ ಇದೀಗ ಗುಣಮುಖರಾಗಿದ್ದಾರೆ.
ಸರ್ಕಾರ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದರೂ ಕೂಡ ತಿಮ್ಮಕ್ಕ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಸ್ಪತ್ರೆ ಆಂಬುಲೆನ್ಸ್ ನಲ್ಲಿಯೇ ಮನೆಗೆ ತೆರಳಿದ್ದಾರೆ.
ಕೆಲ ದಿನಗಳ ಹಿಂದೆ ಏಕಾಏಕಿ ಜ್ವರ ಮೈ ಕೈ ನೋವು ಹಾಗೂ ಸುಸ್ತಿನಿಂದ ಬಳಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಡಿಸ್ಚಾರ್ಜ್ ಆಗಿ ಬಳ್ಳೂರಿನಲ್ಲಿ ಇರುವ ತಮ್ಮ ನಿವಾಸಕ್ಕೆ ತೆರಳಿದ್ದಾರೆ.
ಹಾಸನ ಜಿಲ್ಲಾಡಳಿತ ತಿಮ್ಮಕ್ಕ ಅವರ ಆರೈಕೆಗಾಗಿ ಇಬ್ಬರು ನರ್ಸ್ ಗಳನ್ನು ನಿಯೋಜನೆ ಮಾಡಿದೆ.