ಇದು ಮೂರು ತಿಂಗಳ ಹಳೇ ವಿಷಯ, ಎಫ್‌ಐಆರ್ ಬಗ್ಗೆ ಅಶ್ವತ್ಥ ನಾರಾಯಣ್ ಫಸ್ಟ್ ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿದ್ದರಾಮಯ್ಯರನ್ನು ಟಿಪ್ಪು ಸುಲ್ತಾನ್ ರೀತಿ ಹೊಡೆಯಿರಿ ಎಂದು ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಹೇಳಿದ್ದಾರೆ ಎಂದು ಆರೋಪಿಸಿ ಅವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಈ ಬಗ್ಗೆ ಅಶ್ವತ್ಥ್ ನಾರಾಯಣ್ ಮಾತನಾಡಿದ್ದು, ನನ್ನ ಹೇಳಿಕೆಯಿಂದ ಸಿದ್ದರಾಮಯ್ಯ ಅವರ ಅಥವಾ ಇನ್ಯಾರದ್ದೇ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇಲ್ಲ ಎಂದು ಹಿಂದೆಯೇ ಸ್ಟಷ್ಟಪಡಿಸಿದ್ದೆ. ಮತ್ತು ವಿಷಾದ ಕೂಡ ವ್ಯಕ್ತಪಡಿಸಿದ್ದೆ. ಆಗ ನನ್ನ ವಿಷಾದವನ್ನು ಒಪ್ಪಿಕೊಂಡು, ಈ ವಿಷಯವನ್ನೇ ಅಲ್ಲೇ ಬಿಡಲಾಗಿತ್ತು.

ಆದರೆ ಮೂರು ತಿಂಗಳ ನಂತರ ಹೊಸ ಅಧ್ಯಾಯದ ರೀತಿ ಈ ವಿಷಯ ಮುನ್ನೆಲೆಗೆ ಬಂದಿದೆ. ನಾನು ಎಲ್ಲವನ್ನೂ ಎದುರಿಸಲು ಸಿದ್ಧನಿದ್ದೇನೆ. ರಾಜಕೀಯವಾಗಿ ಇರಬಹುದು ಅಥವಾ ಕಾನೂನಾತ್ಮಕವಾಗಿಯೂ ಇರಬಹುದು, ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಈ ರೀತಿ ಮಾಡುತ್ತಿದೆ ಎಂದಿದ್ದಾರೆ.

https://twitter.com/ANI/status/1661638319061757952?s=20

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!