ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ನಾಯಕ ಸಾರ್ವಜನಿಕರಿಂದ ಏನೇ ಲೂಟಿ ಮಾಡಿದದ್ದರೂ ಪ್ರತಿ ಪೈಸೆಯನ್ನೂ ವಾಪಸ್ ಕೊಡಲೇಬೇಕು. ಇದು ಮೋದಿ ಗ್ಯಾರಂಟಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಜಾರ್ಖಂಡ್ನ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರ ನಿವಾಸದ ಮೇಲೆ ಆದಾಯ ತೆರಿಗೆ ದಾಳಿ ಮತ್ತು ನೂರಾರು ಕೋಟಿ ಮೌಲ್ಯದ ನಗದು ವಶಪಡಿಸಿಕೊಂಡಿದ್ದು, ಈ ಕುರಿತುಟ್ವೀಟ್ ಮಾಡಿದ ಮೋದಿ, ‘ದೇಶವಾಸಿಗಳು ಈ ನೋಟುಗಳ ರಾಶಿಯನ್ನು ನೋಡಿ ಆ ನಂತರ ಪ್ರಾಮಾಣಿಕತೆಯನ್ನು ನಿರ್ಣಯಿಸಬೇಕು.ಯಾವುದೇ ನಾಯಕ ಸಾರ್ವಜನಿಕರಿಂದ ಏನೇ ಲೂಟಿ ಮಾಡಿದದ್ದರೂ ಪ್ರತಿ ಪೈಸೆಯನ್ನೂ ವಾಪಸ್ ಕೊಡಲೇಬೇಕು. ಇದು ಮೋದಿ ಗ್ಯಾರಂಟಿ’ ಎಂದಿದ್ದಾರೆ.
ಧೀರಜ್ ಸಾಹು ಅವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ ಸತತ ಮೂರನೇ ದಿನವೂ ಮುಂದುವರೆದಿದೆ. ಒಡಿಶಾ ಮತ್ತು ಜಾರ್ಖಂಡ್ನಲ್ಲಿ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ನಡೆದ ದಾಳಿಯಲ್ಲಿ ಇದುವರೆಗೆ 100 ಕೋಟಿ ರೂಪಾಯಿಗೂ ಅಧಿಕ ನಗದು ಪತ್ತೆಯಾಗಿದೆ.
ರೆಡ್ ಬೌದ್ಧ ಡಿಸ್ಟಿಲರಿ ಸಂಸದ ಧೀರಜ್ ಸಾಹು ಅವರ ಕುಟುಂಬದ ಕಂಪನಿಯಾಗಿದೆ. ಅವರು ಒಡಿಶಾದಲ್ಲಿ ಅನೇಕ ಮದ್ಯ ತಯಾರಿಕಾ ಕಾರ್ಖಾನೆಗಳನ್ನು ಹೊಂದಿದ್ದಾರೆ. ಅವಿಭಕ್ತ ಕುಟುಂಬದ ಬೆಂಬಲದೊಂದಿಗೆ ಈ ವ್ಯವಹಾರ ನಡೆಸಲಾಗುತ್ತಿದೆ. 200 ಕೋಟಿ ನಗದು ಪತ್ತೆಯಾಗಿದೆ ಎಂದು ಹೇಳಲಾಗುತ್ತಿವೆ. ಜಾರ್ಖಂಡ್ನ ಬೋಲಂಗಿರ್ ಮತ್ತು ಒಡಿಶಾದ ಸಂಬಲ್ಪುರದ ಧೀರಜ್ ಸಾಹು ಅವರ ಪೂರ್ವಜರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.