ಈ ಸ್ಥಿತಿ ಯಾವ ಪೋಷಕರಿಗೂ ಬಾರದೇ ಇರಲಿ: ರಾಹುಲ್ ಗಾಂಧಿ ಕಳವಳ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.
ರೊಮೇನಿಯಾ ಗಡಿಯಲ್ಲಿ ಲಗೇಜ್ ಸಮೇತ ಕುಳಿತಿದ್ದ ವಿದ್ಯಾರ್ಥಿಯರನ್ನು ಯೋಧರು ಎಳೆದಾಡುತ್ತಿದ್ದಾರೆ. ಈ ವಿಡಿಯೋ ನೋಡಿ ನನಗೆ ನೋವಾಗಿದೆ. ವಿಡಿಯೋ ಎಲ್ಲೆಡೆ ಶೇರ್ ಆಗಿದ್ದು, ಅವರ ಪೋಷಕರು ವಿಡಿಯೋ ನೋಡಿದಾಗ ಅವರಿಗೆಷ್ಟು ದುಃಖವಾದೀತು. ಯಾವ ತಂದೆ-ತಾಯಿಗೂ ಈ ಸ್ಥಿತಿ ಬರಬಾರದು. ವಿದ್ಯಾರ್ಥಿಗಳನ್ನು ಹೇಗೆ, ಯಾವಾಗ, ಯಾವ ರೀತಿ ಭಾರತಕ್ಕೆ ಕರೆತಲಿದ್ದಾರೆ ಎನ್ನುವ ಬಗ್ಗೆ ಪೋಷಕರ ಬಳಿ ಸರ್ಕಾರ ಮಾತನಾಡಲಿದೆ. ನಮ್ಮವರನ್ನು ಅನಾಥರನ್ನಾಗಿ ಮಾಡಿ ಬಿಟ್ಟುಬಿಡಲು ಸಾಧ್ಯ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!