ಸಿಎಂ ಆಗಿದ್ದಕ್ಕೆ ಕಂಗ್ರಾಟ್ಸ್ ಅಂಕಲ್ ಎಂದು ಪತ್ರ ಬರೆದ ಪುಟಾಣಿಗೆ ಸಿದ್ದರಾಮಯ್ಯ ರಿಪ್ಲೇ ಹೀಗಿದೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎರಡನೇ ಬಾರಿ ಸಿಎಂ ಆದ ಸಿದ್ದರಾಮಯ್ಯ ಅವರಿಗೆ ಎಂಟನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಕಂಗ್ರಾಟ್ಸ್ ಅಂಕಲ್ ಎನ್ನುವ ಪತ್ರ ಬರೆದಿದ್ದಾಳೆ.

ಇದನ್ನು ಓದಿ ಸಿಕ್ಕಾಪಟ್ಟೆ ಖುಷಿಯಾಗಿದ್ದ ಸಿಎಂ ಮತ್ತೆ ಉತ್ತರವನ್ನೂ ಕಳಿಸಿದ್ದಾರೆ. ಬಡವರಿಗೆ ಸಾಕಷ್ಟು ಭಾಗ್ಯಗಳನ್ನು ಕೊಟ್ಟು ಅವರ ಬಗ್ಗೆ ಆಲೋಚನೆ ಮಾಡಿದ್ದೀರಿ ಎಂದು ಕೊಪ್ಪಳದ ಶ್ರೇಯಾಂಕ ಪತ್ರ ಬರೆದಿದ್ದು, ಸಿಎಂ ಕೂಡ ವಿದ್ಯಾರ್ಥಿನಿಯನ್ನು ಹೊಗಳಿ ಪತ್ರ ಬರೆದಿದ್ದಾರೆ.

ಈ ಬಾರಿ ಕೂಡ ಉತ್ತಮ ಆಡಳಿತ ನೀಡುತ್ತೇನೆ, ಇಷ್ಟು ಸಣ್ಣ ವಯಸ್ಸಿಗೆ ಸಮಾಜದ ಬಗ್ಗೆ ನಿನಗೆ ಸಾಕಷ್ಟು ಕಳಕಳಿಯಿದೆ. ಈ ವಯಸ್ಸಿನಲ್ಲಿ ಬೇರೆಯವರ ಬಗ್ಗೆ ಆಲೋಚಿಸುವ ನೀನು ಚೆನ್ನಾಗಿ ಓದು, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂಇದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!