ಜ್ಯಾತ್ಯಾತೀಯದಲ್ಲಿ ನಂಬಿಕೆ‌ ಇರುವವರು ಆತ್ಮ ಸಾಕ್ಷಿಯಿಂದ ಮತ ಹಾಕುತ್ತಾರೆ: ಸಿದ್ದರಾಮಯ್ಯ

ಹೊಸದಿಗಂತ ವರದಿ, ಹುಬ್ಬಳ್ಳಿ:

ಕೋಮುವಾದಿ ಪಕ್ಷ ಅಭ್ಯರ್ಥಿ ಸೋಲಿಸಬೇಕೆಂದು ಜ್ಯಾತ್ಯಾತೀಯದಲ್ಲಿ ನಂಬಿಕೆ‌ ಇರುವವರು ಆತ್ಮ ಸಾಕ್ಷಿಯಿಂದ ಮತ ಹಾಕುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ವಿಮಾನದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಅವರು ಗೆಲ್ಲುವ ವಿಶ್ವಾಸವಿದೆ. ಮೊದಲು ನಾವು ಅಭ್ಯರ್ಥಿಯನ್ನು ಹಾಕಿದ್ದೇವೆ. ತದನಂತರ ಜೆಡಿಎಸ್ ಅಭ್ಯರ್ಥಿ ಘೋಷಿಸಿದ್ದಾರೆ. ಕೋಮುವಾದಿ ಪಕ್ಷವನ್ನು ಸೋಲಿಸಲು ಅವರು ನಮಗೆ ಸಹಕರಿಸಬೇಕಿತ್ತು ಎಂದರು.

ಈ ಹಿಂದೆ ದೇವೆಗೌಡರು ಚುನಾವಣೆಗೆ ನಿಂತಾಗ ನಾವು ಸಹಕರಿಸಿದ್ದೇವೂ. ಅವರು ಸಹ ಈಗ ಸಹಕರಿಸಬೇಕಿತ್ತು. ದೇವೆಗೌಡರ ಗೆಲ್ಲಬೇಕು ಎಂಬ ಇಚ್ಛೆ ಅವಗಾ ನಮ್ಮದಿತ್ತು. ಅದೇ ರೀತಿ ಅವರು ನಮ್ಮ ಅಭ್ಯರ್ಥಿ ಗೆಲುವಿಗೆ ಸಹಕರಿಸಬೇಕಿತ್ತು. ಈಗ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದು ಅಂದೇನು ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!