ಸ್ಮಶಾನವನ್ನು ಪ್ರೀತಿಸುವವರು, ಹಿಂದೂ ಸಂಸ್ಕೃತಿಯನ್ನು ದ್ವೇಷಿಸುತ್ತಾರೆ: ಸತೀಶ್ ಜಾರಕಿಹೊಳಿಗೆ ತಿರುಗೇಟು ಕೊಟ್ಟ ಜಗ್ಗೇಶ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿಗೆ ನೀಡಿದ ಹೇಳಿಕೆಗೆ ಇಡೀ ರಾಜ್ಯದಲ್ಲಿಯೇ ಖಂಡನೆ, ಟೀಕೆ ವ್ಯಕ್ತವಾಗುತ್ತಿದ್ದು, ಇದೀಗ ಸಂಸದ, ನಟ ಜಗ್ಗೇಶ್ ಕೂಡ ಖಂಡಿಸಿದ್ದಾರೆ.

ಕೆಂಪೇಗೌಡ ಏರ್​​​ಪೋರ್ಟ್​ ಬಳಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಸ್ಮಶಾನ ಪ್ರೀತಿಸುವವರು, ಹಿಂದೂ ಸಂಸ್ಕೃತಿಯನ್ನ ದ್ವೇಷಿಸುತ್ತಾರೆ. ಮಾಟಮಂತ್ರ, ಮಾಯಾಜಾಲ ಮಾಡುವಂತಹವರು. ಮುಸ್ಲಿಂ ಧರ್ಮದ ವಿರುದ್ಧ ಮಾತಾಡಿದರೆ ಅವರ ಪರಿಣಾಮ ವಿಕೃತವಾಗಿರುತ್ತದೆ. ನಮ್ಮ ಹಿಂದೂಗಳು ಶಾಂತಿಪ್ರಿಯರು, ಕ್ಷಮಾಗುಣವುಳ್ಳವರು. ಅವರು ಕ್ಷಮಿಸಿದ್ದಾರೆ ಅಂತ ಪದೆ ಪದೆ ಮಾತನಾಡಲು ಹೋಗಬೇಡಿ. ಅವರು ಎದ್ದುನಿಂತರೆ ನಿಮ್ಮ ಹೆಸರು ಹೇಳಲು ಇಲ್ಲದಂತೆ ಮಾಡುತ್ತಾರೆ ಎಂದು ಹೇಳಿದರು.

ಡಿಕ್ಷನರಿ ಕಂಡುಹಿಡಿದದ್ದು, ಆಂಗ್ಲರು. ಆಂಗ್ಲರಿಗೆ ದೇಶ ಹೊಡೆದು ಆಳುವ ಚಿಂತೆನೆಯಿತ್ತು. ಅವರಿಗೆ ದೇಶವನ್ನ ಕೂಡಿಸಿ ಒಗ್ಗಟ್ಟಾಗಿರಲಿ ಅನ್ನುವ ಚಿಂತನೆ ಇರಲಿಲ್ಲ. ಅವರು ಸಾವಿರ ಅರ್ಥ ಕೊಡಬಹುದು ಆದರೆ ನೀವು ಹಿಂದೂವಾಗಿ ಈ ಮಣ್ಣಲ್ಲಿ ಜನಿಸಿದವರು. ಸರ್ವೆಜನ ಸಖಿನೋ ಭವಂತು ಅಂತ ಹೇಳೋ ಧರ್ಮ ಯಾವುದಾದರು ಇದರೆ ಅದು ನಮ್ಮ ಹಿಂದೂ ಧರ್ಮ‌ ಎಂದು ತಿರುಗೇಟು ನೀಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!