ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನೇಕಲ್ನಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯ ಎರಡನೇ ಹಂತದ ನೀಲಾದ್ರಿ ಬಳಿ ಘಟನೆ ನಡೆದಿದ್ದು, ತೀರ್ಥ(13), ಕಿರಣ್(13) ಹಾಗೂ ಫೈಜಲ್(14) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸಂಜೆ ಮೂವರು ಸ್ನೇಹಿತರು ಆಡಲು ಹೋಗಿದ್ದು, ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಹುಡುಕಾಟ ನಡೆಸಿದ್ದಾರೆ. ಕೆರೆ ದಂಡೆಯ ಬಳಿ ಮೂವರ ಬಟ್ಟೆಗಳು ಪತ್ತೆಯಾಗಿದ್ದು, ಈಜು ಬಾರದಿದ್ದರೂ ನೀರಿಗಿಳದ ಕಾರಣ ಅವಘಡ ಸಂಭವಿಸಿದೆ. ಮಕ್ಕಳ ಮೃತದೇಹ ಇನ್ನೂ ಪತ್ತೆಯಾಗಿಲ್ಲ.