July 14, 2026
Tuesday, July 14, 2026
spot_img

ಮಧ್ಯರಾತ್ರಿ ಮನೆಗೆ ನುಗ್ಗಿ ಉದ್ಯಮಿಗೆ ಕೊ*ಲೆ ಬೆದರಿಕೆ: ಮೂವರು ಅಂದರ್

ಹೊಸದಿಗಂತ ವರದಿ ಮಡಿಕೇರಿ:

ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಕೋವಿಯಿಂದ ಗುಂಡು ಹಾರಿಸಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ ಘಟನೆ ವೀರಾಜಪೇಟೆ ನಗರದ ನಿಸರ್ಗ ಬಡಾವಣೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವೀರಾಜಪೇಟೆಯ ಕೆ.ಕೆ ಗ್ರೂಪ್ ಮಾಲಕ‌‌‌ ಕಾಳಮಂಡ‌ ಜಗತ್ (50) ಅವರ ಮನೆಗೆ ತಡರಾತ್ರಿ ಕೋವಿಯೊಂದಿಗೆ ಬಂದ ವಿ.ಬಾಡಗ ಗ್ರಾಮದ ಮಳವಂಡ ಕಲನ್ ( ಚಿಟ್ಟಿಯಪ್ಪ), ಕಂಜಿತಂಡ ಟೆರಿನ್ ಹಾಗೂ ಕಂಜಿತಂಡ ಸಂಧ್ಯಾ ಅವರುಗಳು ಗುಂಡು ಹಾರಿಸಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಹೇಳಲಾಗಿದೆ.

ಉದ್ಯಮಿ ಜಗತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !