ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿರುವ ಪ್ರವರನದಿಯಲ್ಲಿ ಈಜಲು ಹೋಗಿ ಕಾಣೆಯಾಗಿದ್ದ ಇಬ್ಬರನ್ನು ಹುಡುಕಲು ತೆರಳಿದ್ದ ಎಸ್ಡಿಆರ್ಎಫ್ ಸಿಬ್ಬಂದಿ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಿದ್ದಾರೆ.
ಪ್ರವರ ನದಿಪಾತ್ರದಲ್ಲಿ ಮುಳುಗಿ ಮೃತಪಟ್ಟ ಇಬ್ಬರ ಮೃತದೇಹಗಳ ಹುಡುಕಾಟಕ್ಕೆ ತೆರಳಿದ್ದ ಎಸ್ ಡಿಆರ್ ಎಫ್ ರಕ್ಷಣಾ ತಂಡದ ಬೋಟ್ ಕೂಡ ಪ್ರವರ ನದಿಪಾತ್ರದಲ್ಲಿ ಮಗುಚಿ ಬಿದ್ದ ಪರಿಣಾಮ ಈ ಬೋಟ್ ನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ.
ಪ್ರಕಾಶ್ ನಾಮ ಶಿಂಧೆ, ವೈಭವ್ ಸುನಿಲ್ ವಾಘ್, ರಾಹುಲ್ ಗೋಪಿಚಂದ್ ಪಾವ್ರಾ ಮೃತ ಸಿಬ್ಬಂದಿ