ಹೊಸದಿಗಂತ ವರದಿ, ವಿಜಯಪುರ:
ಮೂರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರ ಹೊರ ವಲಯ ತೊರವಿ ತಾಂಡಾ 1 ರ ತೋಟದಲ್ಲಿ ನಡೆದಿದೆ.
ಅನಿತಾ ಪಿಂಟು ಜಾಧವ (27) ಎಂಬ ಮಹಿಳೆ, ಪ್ರವೀಣ (6) ಸುದೀಪ (4) ಮಮದಿಕಾ (2) ಎಂಬ ತನ್ನ ಮೂರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಹಿಳೆ ಅನಿತಾ ಜಾಧವ ಮೊದಲು ತನ್ನ ಮಕ್ಕಳನ್ನು ಕೃಷಿ ಹೊಂಡದಲ್ಲಿ ಎಸೆದು, ಬಳಿ ತಾನು ನೀರಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಆತ್ಮಹತ್ಯೆಗೆ ಕೌಟುಂಬಿಕ ಕಾರಣ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರ ಭೇಟಿ ನೀಡಿ, ನಾಲ್ಕು ಜನರ ಶವ ಹೊರ ತೆಗೆದು, ಘಟನೆ ಕುರಿತು ತನಿಖೆಗೆ ಮುಂದಾಗಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.