ಕರಾವಳಿಯಲ್ಲಿ ಗುಡುಗು, ಮಿಂಚು‌ ಸಹಿತ ಮಳೆಯ ಅಬ್ಬರ: ರಸ್ತೆಯಲ್ಲೇ ಹರಿದ ನೀರು,ಟ್ರಾಫಿಕ್ ಜಾಮ್

ಹೊಸದಿಗಂತ ವರದಿ, ಮಂಗಳೂರು:

ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಅಬ್ಬರದ ಗುಡುಗು, ಮಿಂಚಿನೊಂದಿಗೆ ಗಾಳಿ ಮಳೆಯಾಗುತ್ತಿದ್ದು, ಅಲ್ಲಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯಿತು.

ಭಾನುವಾರ ಸಂಜೆ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ ಮೊದಲಾದ ಕಡೆ ಗುಡುಗು,ಮಿಂಚು‌ ಸಹಿತ ವರುಣ ಎಂಟ್ರಿ ಕೊಟ್ಟಿದ್ದಾನೆ.

ಗುಡುಗು ಮಳೆಯ ಪರಿಣಾಮ ವಿದ್ಯುತ್ ಕೂಡ ಕೈ ಕೊಟ್ಟಿದ್ದರಿಂದ ಸಂಪೂರ್ಣ ಕತ್ತಲಾವರಿಸಿತ್ತು. ದಿಡೀರ್ ಸುರಿದ ಮಳೆಗೆ ಕೊಡೆಯಿಲ್ಲದೆ ಪೇಟೆ ಸುತ್ತುತ್ತಿದ್ದ ಜನರು ಅಂಗಡಿ ಜಗಲಿಯನ್ನು ಆಶ್ರಯಿಸಿದರು.

ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ಮಳೆಯ ಪರಿಣಾಮ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಮಳೆ ನೀರು ಹರಿದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.ಹೆದ್ದಾರಿಯ
ಕೆಲವೆಡೆ ಎರಡು ಅಡಿಗಿಂತಲೂ ಹೆಚ್ಚು ನೀರು ಹರಿದ ಕಾರಣ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!