ಹೊಸದಿಗಂತ ವರದಿ, ವಿಜಯಪುರ
ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ತಾಂಡಾ-2 ರಲ್ಲಿ ಗುರುವಾರ ರಾತ್ರಿ ಯುವಕನೊಬ್ಬ ಸಿಡಿಲು ಬಡಿದು ಸಾವಿಗೀಡಾಗಿದ್ದಾನೆ.
ಮೃತಪಟ್ಟವನನ್ನು ಯುವರಾಜ ಡಾಕು ರಾಠೋಡ (22) ಎಂದು ಗುರುತಿಸಲಾಗಿದೆ.
ಯುವರಾಜ ರಾಠೋಡ ರಾತ್ರಿ 9 ರ ಸುಮಾರಿಗೆ ಬರ್ಹಿರದಸೆಗೆ ಹೋದಾಗ, ಸಿಡಿಲು ಬಡಿದು ಮೃತಪಟ್ಟಿದ್ದಾನೆ.
ಈ ಸಂಬಂಧ ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.