September 19, 2026
Saturday, September 19, 2026
spot_img

ಪ್ರೈವೇಟ್‌ ಬಸ್‌ಗಳಲ್ಲಿ ಟಿಕೆಟ್‌ ದುಬಾರಿ, ಹಬ್ಬಕ್ಕೆ ಊರಿಗೆ ಹೋಗುವವರಿಗೆ ನೂರಾರು ಸಮಸ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮನೆಯವರ ಜತೆ ಹಬ್ಬ ಆಚರಿಸೋದಕ್ಕೆ ಜನ ಬೆಂಗಳೂರಿನಿಂತ ತಮ್ಮೂರಿನ ಕಡೆ ಪಯಣ ಬೆಳೆಸಿದ್ದಾರೆ. ಆದರೆ ಖಾಸಗಿ ಬಸ್‌ನ ದರ ಕೇಳಿ ಶಾಕ್‌ ಆಗಿದ್ದಾರೆ.

ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ದರ ಏರಿಕೆ ಬಿಸಿ ಮುಟ್ಟಿದೆ. ಹಬ್ಬದ ಹಿನ್ನೆಲೆ ಖಾಸಗಿ ಬಸ್ ಏಜೆನ್ಸಿಗಳು ಟಿಕೆಟ್ ದರ ಹೆಚ್ಚಿಸಿದ್ದು, ಪ್ರಯಾಣಿಕರು ಅನಿವಾರ್ಯವಾಗಿ ಹೆಚ್ಚು ಹಣ ಕೊಟ್ಟು ಹೋಗುವಂತಾಗಿದೆ.

ಯುಗಾದಿ ಮತ್ತು ರಂಜಾನ್ ಹಬ್ಬವನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು 2-3 ಪಟ್ಟು ದರ ಹೆಚ್ಚಳ ಮಾಡಿದ್ದಾರೆ. ಬೆಂಗಳೂರು – ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ಹಲವು ಮಾರ್ಗಗಳಲ್ಲಿ ದರ ಏರಿಕೆ ಮಾಡಲಾಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಹೋಗೋದಕ್ಕೆ ಬಸ್‌ನಲ್ಲಿ ಸಾಮಾನ್ಯವಾಗಿ 600 ರೂಪಾಯಿ ನೀಡಬೇಕಾಗುತ್ತದೆ. ಇದೀಗ ರೇಟ್‌ ಮೂರು ಸಾವಿರ ರೂ. ಆಗಿದೆ.

ಬೆಂಗಳೂರಿಂದ ಧಾರವಾಡಕ್ಕೆ 4,500 ರೂ., ಶಿವಮೊಗ್ಗಕ್ಕೆ 2,799 ರೂ., ಧರ್ಮಸ್ಥಳಕ್ಕೆ 3,600 ರೂ ಹಾಗೂ ಮೈಸೂರಿಗೆ 2,500 ರೂಪಾಯಿ ದರ ಏರಿಕೆ ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !