ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದಿಂದ ವಲಸೆ ಹೋಗಿದ್ದ ವ್ಯಾಘ್ರವೊಂದು ನಾಲ್ಕು ರಾಜ್ಯಗಳಲ್ಲಿ ಯಾವುದೇ ರಕ್ಷಣಾತ್ಮಕ ಆಶ್ರಯ ಪಡೆಯುವಲ್ಲಿ ವಿಫಲವಾಗಿ ಬಳಿಕತನ್ನ ಸ್ವಂತ ರಾಜ್ಯಕ್ಕೆ ಮರಳುತ್ತಿದೆ.
ಉತ್ತರಾಖಂಡ ದಿಂದ ಉತ್ತರ ಪ್ರದೇಶ, ಹರಿಯಾಣ ಮತ್ತು ಹಿಮಾಚಲ ಪ್ರದೇಶದಿಂದ ನೂರಾರು ಕಿಲೋಮೀಟರ್ ಕ್ರಮಿಸಿ ಈಗ ಉತ್ತರಾಖಂಡಕ್ಕೆ ಮರಳುತ್ತಿದೆ ಎಂದು ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಡಾ.ಸಾಕೇತ್ ಬಡೋಲಾ ಅವರು ಹೇಳಿದ್ದಾರೆ.
ಯಮುನೆಯ ನೀರಿನ ಮಟ್ಟ ಕಡಿಮೆಯಾದ ನಂತರ ಹುಲಿ ರಾಜಾಜಿ ಪ್ರದೇಶಕ್ಕೆ ಮರಳಬಹುದು ಎಂದು ಹೇಳಿರುವ ಅವರು ನಾಲ್ಕು ರಾಜ್ಯಗಳ ಮೂಲಕ ಹುಲಿಯು ಅತೀ ದೂರಕ್ಕೆ ವಲಸೆ ಹೋಗಿದ್ದರು ಇದೀಗ ಸುರಕ್ಷಿತವಾಗಿ ಹಿಂತಿರುಗುವುದು ಅದರ ಅನುವಂಶಿಕ ಶ್ರೇಷ್ಠತೆಯನ್ನು ತೋರಿಸುತ್ತದೆ ಎಂದು ಬಡೋಲಾ ಹೇಳಿದರು.
ಹುಲಿಯು ಮೊದಲು ಗಂಗಾ ನದಿಯನ್ನು ದಾಟಿ ಆರ್ಟಿಆರ್ನ ಗೌಹಾರಿ ಮತ್ತು ಚಿಲ್ಲಾ ಶ್ರೇಣಿಯ ಮೂಲಕ ಮೀಸಲು ಪ್ರದೇಶದ ಮೋತಿಚೂರ್ ಶ್ರೇಣಿಯನ್ನು ತಲುಪಿತು.ಇದರ ನಂತರ, ಫೆಬ್ರವರಿಯಲ್ಲಿ ಇದು ಪೌಂಟಾ-ರೇಣುಕಾ ಸಿಂಬಲ್ವಾಡಾ ವನ್ಯಜೀವಿ ಅಭಯಾರಣ್ಯದಲ್ಲಿದೆ ಎಂದು ವರದಿಯಾಗಿತ್ತು. ಆನಂತರ ಮೇ ತಿಂಗಳಲ್ಲಿ ಹುಲಿ ಹರಿಯಾಣದ ಕಲೇಸರ್ ವನ್ಯಜೀವಿ ಅಭಯಾರಣ್ಯದಲ್ಲಿದೆ ಎಂದು ವರದಿಯಾಗಿದೆ. ಈಗ ಹಿಮಾಚಲ ಪ್ರದೇಶದ ರೇಣುಕಾ ಅರಣ್ಯದಲ್ಲಿ ಹುಲಿ ಕಾಣಿಸಿಕೊಂಡಿದೆ. ಆಗಸ್ಟ್ ಮಧ್ಯದಲ್ಲಿ ಹುಲಿ ಅಲ್ಲಿಗೆ ಬಂದಿದೆ.
ಹಿಮಾಚಲ ಪ್ರದೇಶದ ಕಾಡುಗಳಿಗೆ ಹುಲಿ ಮರಳಿರುವುದು ಆರ್ಟಿಆರ್ನಲ್ಲಿ ತನ್ನ ಹಿಂದಿನ ಆವಾಸಸ್ಥಾನಕ್ಕೆ ಹೋಗುತ್ತಿದೆ ಎಂದು ಸೂಚಿಸುತ್ತದೆ ಎಂದು ಬಡೋಲಾ ಹೇಳಿದರು.
ಬಡೋಲಾ ಪ್ರಕಾರ, ನಾಲ್ಕು ರಾಜ್ಯಗಳಲ್ಲಿ ಹುಲಿ ಮಾಡಿದ ದೂರದ ವಲಸೆ ಮತ್ತು ಸುರಕ್ಷಿತವಾಗಿ ಮರಳಿರುವುದು ಅದರ ಅನುವಂಶಿಕ ಶ್ರೇಷ್ಠತೆಯನ್ನು ತೋರಿಸುತ್ತದೆ. ಹೊಸ ಆವಾಸಸ್ಥಾನಗಳ ಹುಡುಕಾಟದಲ್ಲಿ ಗಂಡು ಹುಲಿಗಳು ದೂರದವರೆಗೆ ವಲಸೆ ಹೋಗುವ ಪ್ರವೃತ್ತಿಯು ಉತ್ತಮ ಸಂಕೇತವೆಂದು ಕಂಡುಬರುತ್ತದೆ.
ಕಾರಿಡಾರ್ ಜೀವಂತವಾಗಿದೆ, ಬಹುಶಃ ಹೊಸ ಸ್ಥಳವನ್ನು ಇಷ್ಟಪಡಲಿಲ್ಲ ಹೊಸ ಆವಾಸಸ್ಥಾನಗಳ ಹುಡುಕಾಟದಲ್ಲಿ ಹುಲಿಗಳು ಸಾಮಾನ್ಯವಾಗಿ ದೂರದವರೆಗೆ ಪ್ರಯಾಣಿಸುತ್ತವೆ. ಈ ಸಮಯದಲ್ಲಿ, ಅವು ಹೊಸ ಆವಾಸಸ್ಥಾನ ಮಾನವ ಹಸ್ತಕ್ಷೇಪವಿಲ್ಲದೆ ಸುರಕ್ಷಿತವಾಗಿದೆ ಎಂದು ಕಂಡುಕೊಂಡರೆ ಮತ್ತು ಆಹಾರ ಮತ್ತು ನೀರಿನ ಸಾಕಷ್ಟು ಲಭ್ಯತೆಯೊಂದಿಗೆ ಬದುಕುಳಿಯುವ ಇತರ ನಿಯತಾಂಕಗಳು ಸರಿಯಾಗಿದ್ದರೆ, ನಂತರ ಅವು ಅದನ್ನು ಅಳವಡಿಸಿಕೊಳ್ಳುತ್ತವೆ. ಇಷ್ಟೇಲ್ಲ ಇಲ್ಲ ಎಂದು ತೋರಿದರೆ ಅವು ತಮ್ಮ ಹಿಂದಿನ ಆವಾಸಸ್ಥಾನಕ್ಕೆ ಹಿಂತಿರುಗುತ್ತವೆ. ಉತ್ತರಾಖಂಡ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಹರಿಯಾಣದ ಮೂಲಕ ಸುದೀರ್ಘ ಮತ್ತು ಅಡೆತಡೆಯಿಲ್ಲದ ಹುಲಿ ವಲಸೆಯು ನಾಲ್ಕು ರಾಜ್ಯಗಳ ಮೂಲಕ ಹಾದುಹೋಗುವ ಕಾರಿಡಾರ್ ಜೀವಂತವಾಗಿದೆ ಎಂದು ಸೂಚಿಸುತ್ತದೆ ಎಂದು ಹೇಳಿದರು.