ಹೊಸದಿಗಂತ ವರದಿ ವಿಜಯಪುರ:
ಚಲಿಸುತ್ತಿದ್ದ ವೇಳೆಯೇ ಸಾರಿಗೆ ಬಸ್ ಟಯರ್ ಸ್ಫೋಟಗೊಂಡಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿರುವ ಘಟನೆ ಜಿಲ್ಲೆಯ ಚಡಚಣ ಪಟ್ಟಣ ಹೊರವಲಯದ ದೇವರ ನಿಂಬರಗಿ ಕ್ರಾಸ್ ಸಮೀಪ ಸೋಮವಾರ ನಡೆದಿದೆ.
ಸಾರಿಗೆ ಬಸ್ ಚಲಿಸುವ ವೇಳೆ ಟೈಯರ್ ಸ್ಫೋಟಗೊಂಡಿದೆ. ಚಾಲಕರಾದ ಎನ್.ಎಚ್ ಮುಲ್ಲಾ ಅವರ
ಸಮಯ ಪ್ರಜ್ಞೆಯಿಂದ 45 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಾರಿಗೆ ಬಸ್ ಇಂಡಿಯಿಂದ ಚಡಚಣ ಕಡೆ ಹೊರಟಿತ್ತು. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ