ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೀವನದ ಸಮಸ್ಯೆಗಳಿಂದ ಬೇಸತ್ತ ದಂಪತಿ ಮಗುವನ್ನು ಕೊಂದು ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ, ಆದರೆ ಅದೃಷ್ಟವಶಾತ್ ಎರಡು ವರ್ಷದ ಕಂದಮ್ಮ ಉಳಿದಿದೆ.
ಮಂಡ್ಯದ ಕೆಆರ್ ಪೇಟೆಯಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಹೊಸಕೋಟೆ ಗ್ರಾಮದ ದರ್ಶನ್ ಹಾಗೂ ವಿದ್ಯಶ್ರೀ ತಮ್ಮ ಎರಡು ವರ್ಷದ ಮಗುವಿನ ಕತ್ತು ಹಿಸುಕು ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕತ್ತು ಹಿಸುಕಿದ್ದರಿಂದ ಮಗು ಮೃತಪಟ್ಟಿದೆ ಎಂದು ದರ್ಶನ್ ಹಾಗೂ ದಿವ್ಯಾ ತಿಳಿದುಕೊಂಡಿದ್ದರು. ಆದರೆ ಮಗು ಅಸ್ವಸ್ಥವಾಗಿತ್ತು. ಮೂರು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗೆ ಯಾವ ರೀತಿ ಸಮಸ್ಯೆ ಇತ್ತು ಗೊತ್ತಿಲ್ಲ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ದಾರಿ ಹಿಡಿದಿದ್ದರು ಎಂದಷ್ಟೇ ತಿಳಿದುಬಂದಿದೆ. ಕೆ.ಆರ್.ಪೇಟೆ ಟೌನ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



