ತಿರುಮಲದಲ್ಲಿ ಶ್ರೀವಾರಿ ಬ್ರಹ್ಮೋತ್ಸವ: ಗರುಡ ವಾಹನದಲ್ಲಿ ತಿಮ್ಮಪ್ಪನ ದರುಶನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಿರುಮಲ ಶ್ರೀವಾರಿ ಬ್ರಹ್ಮೋತ್ಸವ ವಿಜೃಂಭಣೆಯಿಂದ ಮುಂದುವರಿದಿದೆ. ಇಂದು ಶ್ರೀವಾರಿ ಬ್ರಹ್ಮೋತ್ಸವದ ಐದನೇ ದಿನ. ಗರುಡ ವಾಹನದ ಮೇಲೆ ಸ್ವಾಮಿ ಭಕ್ತರಿಗೆ ದರುಶನ ನೀಡಲಿದ್ದು, ಸಂಜೆ 7 ಗಂಟೆಗೆ ಗರುಡಸೇವೆ ಆರಂಭವಾಗಲಿದೆ.

ಮಧ್ಯರಾತ್ರಿ 2ರವರೆಗೆ ಈ ಸೇವೆ ನಡೆಯಲಿದೆ. ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಡಿಐಜಿ ಅಮ್ಮಿರೆಡ್ಡಿ, ತಿರುಪತಿ ಎಸ್ಪಿ ಪರಮೇಶ್ವರ್ ರೆಡ್ಡಿ ಮತ್ತು ಟಿಟಿಡಿ ಸಿವಿಎಸ್ಒ ನರಸಿಂಹ ಕಿಶೋರ್ ಭದ್ರತಾ ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

4800 ಪೊಲೀಸರು ಮತ್ತು 1130 ಟಿಟಿಡಿ ವಿಜಿಲೆನ್ಸ್ ಸಿಬ್ಬಂದಿಯೊಂದಿಗೆ ಬಿಗಿ ಭದ್ರತೆಯನ್ನು ಸ್ಥಾಪಿಸಲಾಗಿದೆ. ಕಮಾಂಡ್ ಕಂಟ್ರೋಲ್ ಸೆಂಟರ್ ನಿಂದ 2770 ಸಿಸಿ ಕ್ಯಾಮೆರಾಗಳ ಮೂಲಕ ಮಾನಿಟರಿಂಗ್ ಮಾಡಲಾಗುತ್ತಿದೆ. ನಾಳೆ ಬೆಳಗ್ಗೆ 6 ಗಂಟೆಯವರೆಗೆ ತಿರುಮಲ ಘಾಟ್ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳ ಓಡಾಟ ನಿಲ್ಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!