ದಿನಭವಿಷ್ಯ| ನಕಾರಾತ್ಮಕ ಚಿಂತನೆಗಳು ನಿಮ್ಮ ಮನಸ್ಸನ್ನು ಆವರಿಸಿಕೊಳ್ಳಲು ಬಿಡಬೇಡಿ..

ದಿನಭವಿಷ್ಯ

ಮೇಷ
ನಿಮ್ಮ ಉತ್ಸಾಹ ವೃದ್ಧಿಸುವ ಬೆಳವಣಿಗೆ. ವೃತ್ತಿ ಕಾರ್ಯ ಮತ್ತು ವೈಯಕ್ತಿಕ ಬದುಕಿನ ಮಧ್ಯೆ ಸೂಕ್ತ ಸಮತೋಲನ ಸಾಧಿಸಲು ಶಕ್ತರಾಗುವಿರಿ.

ವೃಷಭ
ದೈನಂದಿನ ಒತ್ತಡದ ಬದುಕು ಸಾಕೆಣಿಸಬಹುದು. ವಿಶ್ರಾಂತಿ ಪಡೆಯುವ ಇಚ್ಛೆ. ಆದರೆ ಕಾರ್ಯಬಾಹುಳ್ಯ ಅದಕ್ಕೆ ಅವಕಾಶ ನೀಡದು.

ಮಿಥುನ
ಆರ್ಥಿಕ ಪ್ರಗತಿ. ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳುವುದು. ವೈಯಕ್ತಿಕ ಬದುಕಿನಲ್ಲಿ ಮನಸ್ಸಿಗೆ ಬೇಸರ ತರುವ ಪ್ರಸಂಗ ಸಂಭವಿಸಬಹುದು.

ಕಟಕ
ಕಾರ್ಯಯೋಜನೆ ರೂಪಿಸಿದರಷ್ಟೇ ಸಾಲದು. ಅದನ್ನು ಕಾರ್ಯರೂಪಕ್ಕೆ ಇಳಿಸಬೇಕು. ಆಗ ಮಾತ್ರ ಅದರ ಫಲವು ಸಿಗುವುದು.

ಸಿಂಹ
ನಿಮ್ಮ ಕಾರ್ಯ ಪ್ರಾಮಾಣಿಕತೆಯಿಂದ ಮಾಡಿ. ಫಲಾಫಲ ಉತ್ತಮವೇ ಆಗುವುದು. ತಾಳ್ಮೆಯಿಂದ ಕಾಯುವುದು ಮುಖ್ಯ. ಅವಸರ ಬೇಡ.

ಕನ್ಯಾ
ಧಾರ್ಮಿಕ ವಿಚಾರಗಳು ಆದ್ಯತೆ ಪಡೆಯುವುದು. ಧಾರ್ಮಿಕ ವ್ಯವಹಾರ ದಲ್ಲಿ ತೊಡಗುವಿರಿ. ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುವಿರಿ. ಇದರಲ್ಲಿ  ಫಲ ಸಿಗುವುದು.

ತುಲಾ
ನಿಮ್ಮ ಕಾರ್ಯದ ಕುರಿತಂತೆ ಕೆಲವರಿಂದ ಅಸಂತೋಷ ವ್ಯಕ್ತವಾದೀತು. ಅವರನ್ನು ಓಲೈಸುವ ಪ್ರಯತ್ನ ಬಿಡಿ. ನಿಮ್ಮ ಕೆಲಸ ಮುಂದುವರಿಸಿ.

ವೃಶ್ಚಿಕ
ನೆಗೆಟಿವ್ ಚಿಂತನೆ ನಿಮ್ಮ ಮನಸ್ಸನ್ನು ಆವರಿಸಲು ಅವಕಾಶ ಕೊಡಬೇಡಿ. ಭವಿಷ್ಯದ ಕುರಿತಂತೆ ಅತಿಯಾಗಿ ಚಿಂತಿಸುತ್ತೀರಿ. ಅದನ್ನು ಬಿಟ್ಟುಬಿಡಿ.

ಧನು
ಪ್ರೀತಿಪಾತ್ರರ ಜತೆ ವಾಗ್ವಾದ ಮಾಡದಿರಿ. ಅದರಿಂದ ಸಂಬಂಧ ಹಾಳಾಗಬಹುದು. ಸಂಯಮದ ವರ್ತನೆ ಇಂದು ಅಗತ್ಯ. ಆರ್ಥಿಕ ಒತ್ತಡ ಅಧಿಕ.

ಮಕರ
ನಿಮ್ಮ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆ ಎದುರಿಸುವಿರಿ. ಅದನ್ನು ಸಮರ್ಥವಾಗಿ ಎದುರಿಸಿ. ಹತಾಶ ರಾಗದಿರಿ. ಕೌಟುಂಬಿಕ ಸಹಕಾರದಿಂದ ಮನಸ್ಸಿಗೆ ನಿರಾಳತೆ.

ಕುಂಭ
ಮುಂಜಾನೆ ಸಂತೋಷದ ಬೆಳವಣಿಗೆ.ಆದರೆ ದಿನ ಕಳೆದಂತೆ ಕೆಲವು ಹೊಸ ಸವಾಲು ಎದುರಾಗಬಹುದು. ಅದನ್ನು ತಾಳ್ಮೆಯಿಂದ ನಿಭಾಯಿಸಿ.

ಮೀನ
ವೃತ್ತಿಯಲ್ಲಿ ಕೆಲವು ಅನಪೇಕ್ಷಿತ ಬೆಳವಣಿಗೆ ಉಂಟಾದೀತು. ಅದನ್ನು ಕೌಶಲದಿಂದ ನಿಭಾಯಿಸಿ. ದುಡುಕಿನ ನಿರ್ಧಾರ ಪ್ರತಿಕೂಲ ಪರಿಣಾಮ ಬೀರೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!