ದಿನಭವಿಷ್ಯ: ಈ ರಾಶಿಯವರಿಗೆ ಒಂದು ಕ್ಷಣ ಖುಷಿ, ಇನ್ನೊಂದು ಕ್ಷಣ ಬೇಸರ

ಮೇಷ
ಆತ್ಮೀಯ ಸ್ನೇಹಿತರು ಇಂದು ನಿಮ್ಮ ದಿನವನ್ನು ತುಂಬುತ್ತಾರೆ. ಮಾನಸಿಕ ಒತ್ತಡಗಳನ್ನು ಅವರು ಮರೆಸುತ್ತಾರೆ. ಕೌಟುಂಬಿಕ ಹೊಣೆ ಹೆಚ್ಚುವುದು.

ವೃಷಭ
ಒಂದೇ ಕೆಲಸವನ್ನು ನಿರಂತರವಾಗಿ ಮಾಡಲು ಮನಸ್ಸಿಲ್ಲವೆ? ಹಾಗಿದ್ದರೆ ನಿಮ್ಮ ಚಿಪ್ಪಿನಿಂದ ಹೊರಬನ್ನಿ, ಹೊಸತನ ಹುಡುಕಿ. ಎಲ್ಲರ ಜತೆ ಬೆರೆಯಿರಿ.

ಮಿಥುನ
ನಿಮ್ಮ ಕಾರ್ಯವೈಖರಿ ನಿಮಗೆ ಹೊಗಳಿಕೆ   ತರುವುದು. ಎಲ್ಲವೂ ಸರಾಗ. ಸಂಜೆ ವೇಳೆಗೆ  ಮೋಜಿನ ಕಾಲಕ್ಷೇಪ. ಇನ್ನಿತರ ಒತ್ತಡಗಳನ್ನು ಮರೆತು ವ್ಯವಹರಿಸಿ.

ಕಟಕ
ನಿಮ್ಮ ಸಿಡುಕಿನಿಂದ ಇತರರ ಮನಸ್ಸು ನೋಯಿಸಬೇಡಿ. ಇತರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೆರವಾಗಿ.

ಸಿಂಹ
ಭಾವನಾತ್ಮಕ ಸಂಘರ್ಷ. ಒಂದು ಕ್ಷಣ ಅತಿಯಾದ ಸಂತೋಷ ಅನುಭವಿಸುವಿರಿ. ಮರುಕ್ಷಣ ಬೇಸರ ಕಾಡಬಹುದು. ಆರ್ಥಿಕ ಲಾಭ ಉಂಟಾಗಲಿದೆ.

ಕನ್ಯಾ
ಗಾಯ ಅಥವಾ ಅನಾರೋಗ್ಯ ಕಾಡಬಹುದು. ಹರಿತ ವಸ್ತು, ವಾಹನ ಚಲಾವಣೆಯಲ್ಲಿ ಎಚ್ಚರ ವಹಿಸಿ. ದುಂದುವೆಚ್ಚ ಕಡಿಮೆ ಮಾಡಿ.

ತುಲಾ
ಇತರರ ಕೆಟ್ಟ ವರ್ತನೆಯನ್ನು   ಕ್ಷಮಿಸುವ ಒಳ್ಳೆತನ ತೋರುವಿರಿ. ಅದನ್ನು ಅವರು ದುರುಪಯೋಗ ಮಾಡದಂತೆ ನೋಡಿಕೊಳ್ಳಿ.

ವೃಶ್ಚಿಕ
ಗ್ರಹಗತಿ ನಿಮಗಿಂದು ಪೂರಕವಾಗಿದೆ.  ಸಂಘಟಿತ ಕಾರ್ಯದಿಂದ ಹೆಚ್ಚಿನ ಯಶಸ್ಸು. ನಾನೊಬ್ಬನೇ ಸಾಧಿಸುತ್ತೇನೆ ಎಂಬ ಅಹಂ ತ್ಯಜಿಸಿ ಕಾರ್ಯವೆಸಗಿ.

ಧನು
ಅನಿರೀಕ್ಷಿತವಾದುದನ್ನು ನಿರೀಕ್ಷಿಸಿ. ಯಶಸ್ಸು, ಹಣ, ಕೀರ್ತಿ ಎಲ್ಲವೂ ಇಂದು ನಿಮ್ಮೆಡೆಗೆ ಉದಾರ ದೃಷ್ಟಿ ತೋರಲಿವೆ. ಎಲ್ಲರನ್ನು ಮೆಚ್ಚಿಸುವಿರಿ.

ಮಕರ
ಒತ್ತಡ, ಉದ್ವಿಗ್ನತೆ, ಅಸಹನೆ ಇಂದು ನಿಮ್ಮನ್ನು ಆವರಿಸುತ್ತದೆ. ಸಂಜೆ ವೇಳೆಗೆ ಪ್ರೀತಿಪಾತ್ರರ ಜತೆಗಿನ ಮಾತುಕತೆ ಇವೆಲ್ಲವನ್ನು ಮರೆಸುತ್ತದೆ.

ಕುಂಭ
ನೀವು ಕೈಗೊಳ್ಳುವ ಕಾರ್ಯಕ್ಕೆ ಕುಟುಂಬಸ್ಥರ ಬೆಂಬಲದ ಅಗತ್ಯವಿದೆ. ಅನುನಯದಿಂದ ಅದನ್ನು ಪಡೆಯಿರಿ. ಅವರಿಗೆ ಅಸಮಾಧಾನ ಸೃಷ್ಟಿಸಬೇಡಿ.

ಮೀನ
ಮುಖ್ಯ ಕೆಲಸ ಇಂದೇ ಪೂರೈಸಬೇಕಾದ ಒತ್ತಡ. ಸಮಯ ಮೀರುತ್ತಿದೆ. ನೆರವು ಸಿಗುತ್ತಿಲ್ಲ. ಸಣ್ಣ ವಿಷಯವನ್ನೂ ಕಡೆಗಣಿಸಬೇಡಿ. ಎಲ್ಲ ಸರಿಯಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!