ದಿನಭವಿಷ್ಯ: ಈ ರಾಶಿಯವರಿಗೆ ಇದೊಂದೇ ಸಲಹೆ, ಕಣ್ಣು, ಕಿವಿ ತೆರೆದಿಡಿ-ಬಾಯಿ ಮುಚ್ಚಿರಿ!

ಮೇಷ
ಅನಿರೀಕ್ಷಿತ ಧನಲಾಭ. ಉದ್ಯಮದಲ್ಲಿ ಪ್ರಗತಿ. ಕೆಲ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಯೊಂದಕ್ಕೆ ಪರಿಹಾರ ಸಿಗುವುದು. ಆಪ್ತರ ಸಹಕಾರ.

ವೃಷಭ
ಇತರರ ಭಾವನೆ ಅರಿತು ವ್ಯವಹರಿಸುವಲ್ಲಿ ನೀವು  ಸಫಲರಾಗುವಿರಿ. ಇದರಿಂದ ಸಂಬಂಧ ಸುಧಾರಣೆ. ಭಿನ್ನಮತ ನಿವಾರಣೆ.

ಮಿಥುನ
ಇಂದು ಅಧಿಕ ಕೆಲಸ. ಒತ್ತಡವೂ ಹೆಚ್ಚು. ಅದರ ಜತೆಗೇ ನಿಮ್ಮ ಕಾರ್ಯಕ್ಕೆ ಕೆಲವರಿಂದ ಅಡ್ಡಿ. ಅಪರಾಹ್ನದ ನಂತರ ಪರಿಸ್ಥಿತಿ ಸುಧಾರಿಸುವುದು.

ಕಟಕ
ಕೆಲವರ ಪ್ರತಿರೋಧ ಎದುರಿಸುವಿರಿ. ನಿಮ್ಮ ಕಾರ್ಯ ಟೀಕಿಸುವವರು ಹಲವರಿದ್ದಾರೆ. ಕೆಲವರನ್ನು ಕಡೆಗಣಿಸುವುದೇ ಒಳಿತು. ಎಲ್ಲರನ್ನು ಮೆಚ್ಚಿಸಲಾರಿರಿ.

ಸಿಂಹ
ಗ್ರಹಗತಿ ನಿಮಗಿಂದು ಪೂರಕವಾಗಿದೆ. ಹಾಗಾಗಿ ಎಲ್ಲ ಕಾರ್ಯಗಳಲ್ಲೂ  ಯಶಸ್ಸು. ಧನಾಗಮ. ಬಂಧುಗಳಿಂದ ಸೊತ್ತು ಪಡೆಯುವಿರಿ.

ಕನ್ಯಾ
ಕಣ್ಣು ಕಿವಿ ತೆರೆದಿಡಿ. ಆದರೆ ಬಾಯಿ ಮುಚ್ಚಿ. ಇದು ನಿಮಗಿಂದು ಸಲಹೆ.  ದುಡುಕಿನ ಮಾತು ಕೆಲಸ ಕೆಡಿಸೀತು. ಎಲ್ಲರ ಜತೆ ಸೌಹಾರ್ದವಿರಲಿ.

ತುಲಾ
ಗೊಂದಲದ ಮನಸ್ಥಿತಿ ಇಂದು ಶಮನ. ಕಾಡುತ್ತಿದ ಸಮಸ್ಯೆಗೆ ಪರಿಹಾರ ದೊರಕೀತು. ಇಷ್ಟದೇವರ ಪ್ರಾರ್ಥನೆ ಮಾಡಿರಿ.

ವೃಶ್ಚಿಕ
ವೃತ್ತಿಯ ಒತ್ತಡವು ಇಂದು ಕಡಿಮೆ. ಇದರಿಂದ ಮನಸ್ಸು ನಿರಾಳ. ಪ್ರೀತಿಪಾತ್ರರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ ಲಭಿಸುವುದು.

ಧನು
ನಿಮಗಿಂದು ಮನೆಯಲ್ಲಿ ಅಽಕ ಕಾರ್ಯವಿದೆ.  ಜತೆಗೂಡಿ ಕೆಲಸ ಮಾಡಿದರೆ ಸುಲಭ ವಾದೀತು.ಆರ್ಥಿಕ ಸ್ಥಿತಿ ಸುಧಾರಣೆ. ಧನ ಲಾಭ.

ಮಕರ
ಆಪ್ತರೊಂದಿಗೆ ಗಂಭೀರ ವಿಷಯದ ಚರ್ಚೆ. ಇತರರ ಸಲಹೆ ಪಡೆದೇ ಮುಂದಿನ ಹೆಜ್ಜೆ ಇಡಿ. ಕೌಟುಂಬಿಕ ಬಿಕ್ಕಟ್ಟು ಪರಿಹಾರ ಕಾಣುವುದು.

ಕುಂಭ
ಕೆಲವೊಮ್ಮೆ ಅತಿ ಯಾದ ಒತ್ತಡವು ಉತ್ತಮ ಕೆಲಸ ಹೊರತೆಗೆಸುತ್ತದೆ. ಇದು ನಿಮಗೂ ಇಂದು ಅನ್ವಯ. ದಿನದಂತ್ಯಕ್ಕೆ ಎಲ್ಲರಿಂದ ಮೆಚ್ಚುಗೆ.

ಮೀನ
ಅಧಿಕ ಖರ್ಚು. ಅನಿರೀಕ್ಷಿತ ಬೆಳವಣಿಗೆ. ಹೊಟ್ಟೆ ಕೆಡುವ ಪ್ರಸಂಗ. ಈ ದಿನ ಕಹಿಯಾದರೂ, ಅನುಭವದ ಪಾಠವೂ ನಿಮಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!