ದಿನಭವಿಷ್ಯ: ಇಂದು ಆರ್ಥಿಕತೆ ವಿಷಯದಲ್ಲಿ ಬೆಸ್ಟ್‌ ದಿನ, ಹೆಚ್ಚು ಸಮಯದಿಂದ ಕಾಡುತ್ತಿದ್ದ ಹಣದ ಸಮಸ್ಯೆಗೆ ಮುಕ್ತಿ!

ಮೇಷ
ಖಾಸಗಿ ಮತ್ತು ವೃತ್ತಿ ವಿಷಯದ ಕುರಿತು ಮುಕ್ತ ಮನಸ್ಸಿನಿಂದ ಯೋಚಿಸಿ.   ಅದರಿಂದ ಸಮಸ್ಯೆ ಪರಿಹಾರ ಸಾಧ್ಯ. ಉಳಿತಾಯ ಹೆಚ್ಚಳ.

ವೃಷಭ
ಅಸಹನೆ ಹೆಚ್ಚುವ ಪ್ರಸಂಗ ಸಂಭವ. ಹೊಣೆಯತ್ತ ಗಮನ ಇರಲಿ, ಬೇರೆಡೆ ಮನಸ್ಸು ಹರಿಯದಂತೆ ನೋಡಿ. ಗಂಟಲು ನೋವು ಸಾಧ್ಯತೆ.

ಮಿಥುನ
ಕುಟುಂಬ ಸದಸ್ಯರ ಮನಸ್ಥಿತಿ ಅರಿತು ವ್ಯವಹರಿಸಿ. ಅವರ ಮನ ನೋಯುವ ಮಾತು ಆಡದಿರಿ. ವೃತ್ತಿಯಲ್ಲಿ ಅಧಿಕ ಒತ್ತಡ.

ಕಟಕ
ಸಮಾಧಾನದಿಂದ ಕಾರ್ಯ ನಿರ್ವಹಿಸಿ. ಅವಸರ ಕೆಲಸ ಕೆಡಿಸೀತು.ಮನೆಯಲ್ಲಿ ರೋಷ ನಿಯಂತ್ರಿಸಿ. ಸಾಮರಸ್ಯ ಕಾಪಾಡಿಕೊಳ್ಳಿ.

ಸಿಂಹ
ವೃತ್ತಿಯಲ್ಲಿ ಪೂರಕ ಪರಿಸ್ಥಿತಿ. ಮನೆಯ ಸದಸ್ಯರ ಜತೆ ಹೆಚ್ಚು ಕಾಲ ಕಳೆಯಲು ಯತ್ನಿಸಿ. ಅವರನ್ನು ಕಡೆಗಣಿಸಿದ ಭಾವ ಮೂಡದಿರಲಿ.

ಕನ್ಯಾ

ಹಲವಾರು ಕೆಲಸ ಇದೇ ದಿನ ಮುಗಿಸ ಬೇಕಾದ ಒತ್ತಡ. ಮನೆ ಯವರ ಜತೆ ಕಾಲ ಕಳೆಯಿರಿ. ಒತ್ತಡಮಾಯ. ಆದಾಯ ಹೆಚ್ಚಳ.

ತುಲಾ
ಸಂಗಾತಿ ಜತೆ ಭಿನ್ನಾಭಿಪ್ರಾಯ. ಮನಸ್ಸಿನ ಶಾಂತಿ ದೂರ.ಹಿರಿಯರ ಕಿವಿಮಾತಿಂದ ಬೇಸರ ಪಡಬೇಡಿ. ಗಂಟಲು ಅಥವಾ ಬಾಯಿ ನೋವು.

ವೃಶ್ಚಿಕ
ಇತರರ ಭಾವನೆಗೆ ಸರಿಯಾಗಿ ಸ್ಪಂದಿಸುವ ಮೂಲಕ ಆತ್ಮೀಯತೆ ಬೆಳೆಸಿಕೊಳ್ಳುವಿರಿ. ಆರ್ಥಿಕ ಪರಿಸ್ಥಿತಿ ಚೇತರಿಕೆ. ಕೌಟುಂಬಿಕ ನೆಮ್ಮದಿ.

ಧನು
ಕಠಿಣ ಪ್ರಯತ್ನದ ಬಳಿಕ ಸಫಲತೆ ಸಿಗಲಿದೆ. ಜಡ ಬಿಟ್ಟು ಕೆಲಸ ಮಾಡಿ.  ಸ್ವಂತ ಉದ್ದಿಮೆದಾರರಿಗೆ ಒಳ್ಳೆಯ ಲಾಭ. ಆರೋಗ್ಯ ಸಮಸ್ಯೆ ಕಾಡಬಹುದು.

ಮಕರ
ಸಂವಹನ ಕೊರತೆ. ಇದರಿಂದ ವೃತ್ತಿ ಮತ್ತು ಖಾಸಗಿ ವ್ಯವಹಾರದಲ್ಲಿ ಹಿನ್ನಡೆ ಉಂಟಾದೀತು. ಅಜೀರ್ಣ ಸಮಸ್ಯೆ ಕಾಡಬಹುದು.

ಕುಂಭ
ಒತ್ತಡದ ದಿನ. ಕಾಲಮಿತಿಯಲ್ಲಿ ಕೆಲಸ ಮುಗಿಸಬೇಕಾಗುವುದು.   ಹಣವನ್ನು ಸದ್ವಿನಿಯೋಗ ಮಾಡಿ. ದುಂದುವೆಚ್ಚ ಬೇಡ. ಕೌಟುಂಬಿಕ ಸಮಾಧಾನ.

ಮೀನ
ಉತ್ತಮ ಆರ್ಥಿಕ ಪ್ರಗತಿ. ಉಳಿತಾಯ ಹೆಚ್ಚಳ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶ. ವಿವಾದಕ್ಕೆ ಸಿಲುಕದಂತೆ ಎಚ್ಚರ ವಹಿಸಿರಿ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!