ದಿನಭವಿಷ್ಯ: ಇತರರ ಕೆಲಸ ಟೀಕಿಸಲು ಹೋಗದಿರಿ, ನೀವು ಅವರಿಂದಲೇ ಟೀಕೆ ಕೇಳಬೇಕಾದೀತು

ಮೇಷ
ನಕಾರಾತ್ಮಕ ಚಿಂತನೆ ಬಿಡಿ.  ಪಾಸಿಟಿವ್ ಆಗಿ ಯೋಚಿಸಿ. ಅಸಾಧ್ಯದ ಕೆಲಸವೂ ನಿಮ್ಮಿಂದ ಸಾಧ್ಯವಾಗಲಿದೆ.  ಕುಟುಂಬದಲ್ಲಿ ಭಿನ್ನಮತ ನಿವಾರಿಸಿಕೊಳ್ಳಿ.

ವೃಷಭ
ಮನೆಯಲ್ಲಿ ಸೌಹಾರ್ದ ವಾತಾವರಣ.ಇದರಿಂದ ನಿಮಗೆ ಹೆಚ್ಚಿನ ಹುರುಪು. ದುಬಾರಿ ವಸ್ತು ಖರೀದಿಸುವ ಮುನ್ನ ಸರಿಯಾಗಿ ಪರಾಮರ್ಶಿಸಿ.

ಮಿಥುನ
ಇತರರ ಕೆಲಸ ಟೀಕಿಸಲು ಹೋಗದಿರಿ. ನೀವು ಅವರಿಂದಲೇ ಟೀಕೆ ಕೇಳಬೇಕಾದೀತು. ಭವಿಷ್ಯದ ಕುರಿತಂತೆ ಚಿಂತೆ ಕಾಡಬಹುದು. ಆರ್ಥಿಕ ಒತ್ತಡ.

ಕಟಕ
ಕೆಲವರ ವರ್ತನೆ  ಕುರಿತು ಅತಿಯಾಗಿ ಚಿಂತಿಸಿ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುವಿರಿ. ಅಂತಹ ಮನೋಭಾವನೆ ಬಿಟ್ಟರೆ ಒಳಿತು.

ಸಿಂಹ
ಕುಟುಂಬದಲ್ಲಿ ಸಂಬಂಧ  ಸುಧಾರಣೆ. ಮನಸ್ತಾಪ ನಿವಾರಣೆ. ಆಹಾರದಲ್ಲಿ ಹಿತಮಿತ ಸಾಧಿಸಿ.ಇಲ್ಲವಾದಲ್ಲಿ ಹೊಟ್ಟೆ ಕೆಡುವ ಪ್ರಸಂಗ ಉದ್ಭವಿಸೀತು.

ಕನ್ಯಾ
ವ್ಯವಹಾರ,ಹಣದ ವಿಚಾರ ಎಲ್ಲವೂ ನಿಮಗೆ ಪೂರಕವಾಗಿ ಸಾಗುವುದು. ನೆರೆಯವರ ಜತೆ ಕಲಹ ಬೇಡ. ಅದರಿಂದ  ಮನಶ್ಯಾಂತಿ ಹಾಳು.

ತುಲಾ
ವಿರೋಧಿಗಳು ಅಪಪ್ರಚಾರ ನಡೆಸಬಹುದು. ಅದನ್ನು ಕಡೆಗಣಿಸಿ. ಸಮಾನಮನಸ್ಕರ ಸಂಗದಲ್ಲಿ ನೆಮ್ಮದಿ ಪಡೆಯುವಿರಿ.

ವೃಶ್ಚಿಕ
ನಿಮ್ಮ ಸುತ್ತಲಿನವರು ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಕೊರಗು ಬಿಡಿ. ಇತರರ ಮರುಳು  ಮಾತಿಗೆ  ಮರುಳಾಗಬೇಡಿ. ದೃಢ ನಿಲುವಿರಲಿ.

ಧನು
ಆತ್ಮೀಯರ ಮಧ್ಯೆ ಭಿನ್ನಾಭಿಪ್ರಾಯ ಉಂಟಾದೀತು. ಅದು ಉಲ್ಬಣಗೊಳ್ಳಲು ಅವಕಾಶ ನೀಡದಿರಿ. ಬಿಗುಮಾನ ಬಿಟ್ಟು ವ್ಯವಹರಿಸಬೇಕು.

ಮಕರ
ನಿಮಗೆ ಹಿತವೆನಿಸದ ಬೆಳವಣಿಗೆ ಸಂಭವಿಸಬಹುದು. ಆದರೆ ಅದನ್ನು ಸರಿಪಡಿಸುವ ವಿಧಾನ ನಿಮಗೆ ತಿಳಿದಿದೆ. ಹಿಂಜರಿಕೆ ಬೇಡ.

ಕುಂಭ
ಪ್ರಮುಖ ನಿರ್ಧಾರ ಫಲ ನೀಡುವ ದಿನ. ಈ ದಿನ ಸದುಪಯೋಗ ಮಾಡಿಕೊಳ್ಳಿ. ವೃತ್ತಿಯಲ್ಲಿ ಉದಾಸೀನತೆ ಬಿಟ್ಟು ಕಾರ್ಯವೆಸಗಿ.ಕೌಟುಂಬಿಕ ಶಾಂತಿ.

ಮೀನ
ಎಲ್ಲರನ್ನು  ಮೆಚ್ಚಿಸುವ ಪ್ರಯತ್ನ ಫಲ ನೀಡದು. ಅಂತಹ ಪ್ರಯತ್ನ ಮಾಡಬೇಡಿ. ನಿಮ್ಮನ್ನು ಟೀಕಿಸುವವರನ್ನು ಕಡೆಗಣಿಸುವುದೇ ಒಳಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!