ದಿನಭವಿಷ್ಯ: ಮನಸ್ಸು ತೆರೆದಿಡಲು ಹಿಂಜರಿಕೆ ಬೇಡ, ಗೊಂದಲ ನಿವಾರಣೆಯಾಗೋದು ಹೀಗೆಯೇ!

ಮೇಷ
ಆತ್ಮೀಯರ ಜತೆಗಿನ ಸಂಬಂಧ ಬಿಕ್ಕಟ್ಟಿಗೆ ಸಿಲುಕಬಹುದು. ಅದಕ್ಕೆ ನಿಮ್ಮ ನಡೆನುಡಿ ಕಾರಣವಾಗುವುದು.  ವಿವೇಕದಿಂದ ವರ್ತಿಸಿರಿ.  ಕೋಪ ನಿಯಂತ್ರಿಸಿ.

ವೃಷಭ
ವೃತ್ತಿಯಲ್ಲಿ  ನಿಮ್ಮನ್ನು ದಮನಿಸಲು ಕೆಲವರ ಯತ್ನ. ಪ್ರಬುದ್ಧತೆಯಿಂದ ವರ್ತಿಸಿರಿ. ಅವಿವೇಕದ ನಿರ್ಧಾರ ತಾಳದಿರಿ.  ಕೌಟುಂಬಿಕ ಒತ್ತಡ.

ಮಿಥುನ
ನಿಮ್ಮ ವ್ಯವಹಾರ ವೃದ್ಧಿಗೆ ಪೂರಕ ವಾತಾವರಣ. ವ್ಯಕ್ತಿಯೊಬ್ಬರ ಬಗ್ಗೆ ಅತಿಯಾದ ಕಾಳಜಿ ತೋರುವಿರಿ. ಆದರೆ ಅವರಿಂದ ಅದೇ ಸ್ಪಂದನೆ ದೊರಕಲಾರದು.

ಕಟಕ
ಆಪ್ತರ ಜತೆಗೆ ವಾಗ್ವಾದ ನಡೆದೀತು. ಅದನ್ನು ತಪ್ಪಿಸುವ ಹೊಣೆ ನಿಮ್ಮದೇ ಆಗಿದೆ. ಯಾರದೋ ಮಾತು ಕೇಳಿ ವರ್ತಿಸದಿರಿ. ಭಾವನೆ ನಿಯಂತ್ರಿಸಿ.

ಸಿಂಹ
ನಿಮ್ಮ ಮನಸ್ಸು ತೆರೆದಿಡಲು ಹಿಂಜರಿಕೆ ಬೇಡ. ಇದರಿಂದ ಗೊಂದಲ ನಿವಾರಣೆ. ಇತರರ ತಪ್ಪನ್ನು ಮನ್ನಿಸಿರಿ. ಅವರ ವಿರುದ್ಧ ದ್ವೇಷ ಸಾಧಿಸದಿರಿ.

ಕನ್ಯಾ
ಮನೆಯಲ್ಲಿ ಬಿಗುವಿನ ವಾತಾವರಣ. ಸೃಷ್ಟಿಯಾದೀತು. ಸಹನೆಯಿಂದ ವರ್ತಿಸಿರಿ. ಮಾತಿಗೆ ಪ್ರತಿಮಾತು, ಏಟಿಗೆ ಎದುರೇಟು ಧೋರಣೆ ಬಿಡಿ.

ತುಲಾ
ವೃತ್ತಿ ಹೊಣೆಗಾರಿಕೆ ಹೆಚ್ಚುವುದು.  ತಾಳ್ಮೆಯಿಂದ ವ್ಯವಹರಿಸುವುದು ಮುಖ್ಯ.ಬಂಧುಗಳ ಜತೆ ಸಂಘರ್ಷ ಉಂಟಾದೀತು.

ವೃಶ್ಚಿಕ
ಮನಸ್ಸಿನಲ್ಲಿ ಏನೋ ಕೊರಗು. ಯಾರಲ್ಲೂ ಹೇಳಲಾಗದ ಚಡಪಡಿಕೆ. ಇತರರ ವರ್ತನೆಯ ಕುರಿತಂತೆ ಅತಿಯಾಗಿ ಯೋಚಿಸುವುದನ್ನು ಬಿಟ್ಟಬಿಡಿ.

ಧನು
ಮಾಡಬೇಕಾದ ಕೆಲಸ ತಕ್ಷಣವೇ ಮಾಡಿರಿ. ಆತ್ಮೀಯರು ನಿಮ್ಮ ಭಾವನೆ ಅರ್ಥೈಸುತ್ತಿಲ್ಲ ಎಂಬ ನೋವು ಕಾಡುವುದು. ಸಂಯಮವಿರಲಿ.

ಮಕರ
ಆಂತರಿಕ ತುಮುಲ. ಯಾವುದೋ ವಿಷಯ ಮನಸ್ಸನ್ನು ಕೊರೆಯುವುದು.  ಕೌಟುಂಬಿಕ ಸಂಘರ್ಷ ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಿ.

ಕುಂಭ
ಕೆಲವರು ನಿಮ್ಮ ಆತ್ಮೀಯ ಬಾಂಧವ್ಯಕ್ಕೆ ಹುಳಿ ಹಿಂಡಲು ಯತ್ನಿಸುವರು.  ಅದಕ್ಕೆ ಅವಕಾಶ ಕೊಡಬೇಡಿ. ಚಾಡಿ ಮಾತುಗಳಿಗೆ ಕಿವಿ ಕೊಡಬೇಡಿ.

ಮೀನ
ಕೆಲಸದ ಒತ್ತಡ ಅಧಿಕ. ಆರೋಗ್ಯದ ಮೇಲೂ ಇದು ಪರಿಣಾಮ ಬೀರಬಹುದು. ಆತ್ಮೀಯರ ವರ್ತನೆ ಮನಸ್ಸಿಗೆ ನೋವು ತರುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!