ದಿನಭವಿಷ್ಯ: ಇಂದು ಆಪ್ತರೊಡನೆ ಭಿನ್ನಾಭಿಪ್ರಾಯ ಬರುವ ಸಾಧ್ಯತೆ, ತಾಳ್ಮೆ ಇರಲಿ!

ಮೇಷ
ನಿಮ್ಮ ಸುತ್ತಲಿನ ಜನರ ಜತೆ  ಹೊಂದಾಣಿಕೆಗೆ ಆದ್ಯತೆ ಕೊಡಿ. ಇತರರ ಜತೆ ವಾಗ್ವಾದಕ್ಕೆ ಹೋಗದಿರಿ.  ಕೆಲವು ಬೆಳವಣಿಗೆ ಮನಸ್ಸಿನ ಸ್ವಾಸ್ಥ್ಯ ಕೆಡಿಸೀತು.

ವೃಷಭ
ನೀವೊಬ್ಬರೆ ಕಾರ್ಯ ಸಾಧಿಸಲು ಹೊರಟರೆ ಸಫಲವಾಗದು ಸಂಘಟಿತ ಕಾರ್ಯ ಫಲ ನೀಡುವುದು. ಇತರರ  ಸಹಕಾರ ಪಡೆಯಲು ಮುಜುಗರ ಬೇಕಿಲ್ಲ.

ಮಿಥುನ
ಕೆಲದಿನಗಳಿಂದ ಕಾಡುತ್ತಿದ್ದ ದೈಹಿಕ ಹಾಗೂ ಮಾನಸಿಕ ನೋವು ನಿವಾರಣೆ. ಮನಸ್ಸಿಗೆ ನಿರಾಳತೆ ತರುವ ಬೆಳವಣಿಗೆ. ಕೌಟುಂಬಿಕ ನೆಮ್ಮದಿ.

ಕಟಕ
ನಿಮ್ಮಲ್ಲಿ ನಕಾರಾತ್ಮಕ   ಚಿಂತನೆ ತುಂಬುವ ಜನರನ್ನು ದೂರವಿಡಿ. ಸಾಂಸಾರಿಕ ಅಸಮಾಧಾನ. ಸಮಾಧಾನದಿಂದ ವ್ಯವಹರಿಸಿರಿ.

ಸಿಂಹ
ಆಪ್ತರೊಂದಿಗೆ ಭಿನ್ನಾಭಿಪ್ರಾಯ ಉಂಟಾದೀತು. ಸಹನೆಯಿರಲಿ.ಸೌಹಾರ್ದದಿಂದ ಸಮಸ್ಯೆ ಬಗೆಹರಿಸಿಕೊಳ್ಳಿ.

ಕನ್ಯಾ
ಇತರರ  ವರ್ತನೆ ನಿಮ್ಮ ಮೇಲೆ ಪ್ರಭಾವ ಬೀರಬಹುದು. ಆದರೆ ಅದರಿಂದ ಸಮಸ್ಯೆಗೆ ಸಿಲುಕದಂತೆ ನೋಡಿಕೊಳ್ಳಿ. ಪ್ರೀತಿಯಲ್ಲಿ ಯಶಸ್ಸು.

ತುಲಾ
ಸಹೋದ್ಯೋಗಿ ಜತೆ ಆತ್ಮೀಯ ಸಂಬಂಧ. ಭಾವನೆಗಳು ಬದಲಾಗಬಹುದು. ಕೆಲವರ ಅಸಮಾಧಾನ ಶಮನಿಸಲು ನೀವು ಆದ್ಯತೆ ಕೊಡಬೇಕು.

ವೃಶ್ಚಿಕ
ಕೌಟುಂಬಿಕ ಕಲಹ, ಅಸಮಾಧಾನ. ಬಂಧುಗಳ ಜತೆ ನಿಮಗೆ ಸರಿಬರುವುದಿಲ್ಲ. ಸಂಘರ್ಷಕ್ಕಿಂತ ಹೊಂದಾಣಿಕೆ ಮುಖ್ಯ ಎಂದರಿಯಿರಿ.

ಧನು
ಕೆಲವು ಬೆಳವಣಿಗೆ ನಿಮಗೆ ಅಸಂತೋಷ ಹುಟ್ಟಿಸುವುದು. ಆದರೆ ಆ ಕುರಿತು ನೀವು ಏನೂ ಮಾಡಲಾಗುವುದಿಲ್ಲ. ಹೊಂದಾಣಿಕೆಯಲ್ಲಿ ಹಿತವಿದೆ.

ಮಕರ
ಯಾವುದೇ ವಿಷಯದಲ್ಲಿ ಆತುರದ ತೀರ್ಮಾನ ಬೇಡ. ಅದರಿಂದ ನಿಮಗೇ ಪ್ರತಿಕೂಲ ಆದೀತು. ಕುಟುಂಬಸ್ಥರಿಂದ ಅಸಹಕಾರ.

ಕುಂಭ
ಮನೆಯಲ್ಲಿ ವಾಗ್ವಾದ ನಡೆದೀತು. ಆದರೆ ಇತರರ ಮೇಲೆ ನಿಮ್ಮ ಅಭಿಪ್ರಾಯ ಹೇರಲು ಹೋಗಬೇಡಿ. ಇತರರ ಮಾತನ್ನೂ ಕೇಳುವ
ಸಹನೆ ಇರಲಿ.

ಮೀನ
ಇತರರ ಒಳಿತಿಗಾಗಿ ನಿಮ್ಮ ಇಷ್ಟವನ್ನು ಬದಿಗೆ ಸರಿಸಬೇಕಾಗುವುದು. ಇತರರ ಸಂತೋಷದಲ್ಲಿ ನಿಮ್ಮ ಹರ್ಷವನ್ನು ಕಾಣುವಿರಿ. ಅದರಿಂದಲೇ ನೆಮ್ಮದಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!