ದಿನಭವಿಷ್ಯ : ಮನೆಯಲ್ಲಿ ಅಶಾಂತಿ ಉಂಟಾಗಬಹುದು, ಅವಸರದ ನಿರ್ಧಾರ ಬೇಡ!

ಮೇಷ
ಮನೆಯಲ್ಲಿ ಅಶಾಂತಿ ಹೆಚ್ಚಿಸುವ ಬೆಳವಣಿಗೆ. ನಿರಾಳ ಮನಸ್ಸಿನಿಂದ ಸಮಸ್ಯೆ ಬಗೆಹರಿಸಿ. ಅವಸರದ ನಿರ್ಧಾರ ತಳೆಯದಿರಿ. ವೃತ್ತಿಯಲ್ಲಿ ಒತ್ತಡ ಹೆಚ್ಚು.

ವೃಷಭ
ವೃತ್ತಿ ಕ್ಷೇತ್ರದಲ್ಲಿ ಅನಪೇಕ್ಷಿತ ಬೆಳವಣಿಗೆ.  ಸಮಾಧಾನದಿಂದ ಯೋಚಿಸಿ ಕಾರ್ಯ ಎಸಗಿದರೆ ಎಲ್ಲವೂ ಸುಸೂತ್ರವಾಗುವುದು. ಕೌಟುಂಬಿಕ ಬೆಂಬಲ.

ಮಿಥುನ
ನೀವು ಬಯಸಿದ ವಿಷಯದಲ್ಲಿ  ನಿಮಗೆ ಅನುಕೂಲಕರ ಪರಿಸ್ಥಿತಿ ಏರ್ಪಡಲಿದೆ. ಆಪ್ತರ ಜತೆ ಭಿನ್ನಮತ ಶಮನ. ಇತರರ ಭಾವನೆಗೂ ಬೆಲೆ ಕೊಡಿರಿ.

ಕಟಕ
ಎಲ್ಲವನ್ನೂ ಭಾವುಕರಾಗಿ ಯೋಚಿಸದಿರಿ.  ಪ್ರಾಕ್ಟಿಕಲ್ ಆಗಿ ವರ್ತಿಸುವುದೂ ಮುಖ್ಯ.  ಅದರಿಂದ ನಿಮ್ಮ ಸಮಸ್ಯೆ ಪರಿಹಾರ ಕಂಡೀತು.

ಸಿಂಹ
ನಿಮಗೆ ಪೂರಕವಾದ ದಿನ. ಆತ್ಮವಿಶ್ವಾಸ ಹೆಚ್ಚಿಸುವ ಪ್ರಸಂಗ. ಕಠಿಣ ಕಾರ್ಯವೂ ಇಂದು ಸುಲಭವಾಗಿ ನೆರವೇರುವುದು. ಕೌಟುಂಬಿಕ ಶಾಂತಿ.

ಕನ್ಯಾ
ನಿಮ್ಮ ವಿಶ್ವಾಸ ಕುಂದಿಸುವ ಬೆಳವಣಿಗೆ ಉಂಟಾದೀತು. ಅದನ್ನು ಧೈರ್ಯದಿಂದ ಎದುರಿಸಿ. ಇತರರಿಂದ ಸೂಕ್ತ ಸಹಾಯ ನಿಮಗೆ ದೊರಕುವುದು.

ತುಲಾ
ಸಂತೋಷದ ದಿನ. ಸಂಗಾತಿ ಜತೆಗೆ ಸೌಹಾರ್ದಮಯ ಸಂಬಂಧ. ಕಾರ್ಯ ಸಾಫಲ್ಯ. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ಮೊಳೆಯುವುದು.

ವೃಶ್ಚಿಕ
ಎಲ್ಲ ವಿಷಯಗಳಲ್ಲೂ ನಿಮಗೆ ಅನುಕೂಲಕರ ಫಲಿತಾಂಶ. ಮಹತ್ವದ ಕಾರ್ಯ ಅನುಷ್ಠಾನ ಮಾಡಲು ಸಕಾಲ. ಕಾರ್ಯಸಿದ್ಧಿ. ದೈಹಿಕ ನೋವು ನಿವಾರಣೆ.

ಧನು
ಕಠಿಣ ಗುರಿ ಸಾಧಿಸಬೇಕಾದ ಅನಿವಾರ್ಯತೆ. ಹಾಗಾಗಿ ದಿನವಿಡೀ ಉದ್ವಿಗ್ನತೆ, ಒತ್ತಡ. ವಾದವಿವಾದಗಳಿಂದ ದೂರವಿರಿ.

ಮಕರ
ಪ್ರಗತಿಪರ ದಿನ. ಕಾರ್ಯದಲ್ಲಿ ಯಶಸ್ಸು. ನಿಮ್ಮ ಹೊಂದಾಣಿಕೆಯ ಸ್ವಭಾವದಿಂದಾಗಿ ಎಲ್ಲರನ್ನು ಸರಿದೂಗಿಸಿಕೊಂಡು ಹೋಗುವಿರಿ.

ಕುಂಭ
ಕ್ಲಿಷ್ಟಕರ ಪರಿಸ್ಥಿತಿ ಎದುರಿಸುವಿರಿ. ಭಾವನೆಯ ಮೇಲೆ ನಿಯಂತ್ರಣವಿರಲಿ. ಸಮಚಿತ್ತದಿಂದ ವರ್ತಿಸಿ. ಕೆಲಸದಲ್ಲಿ ಹೊಣೆಗಾರಿಕೆ ಹೆಚ್ಚುವುದು.

ಮೀನ
ಬಿಕ್ಕಟ್ಟಿನ ಸಂದರ್ಭ ಒದಗಿದರೂ ಶಾಂತವಾಗಿ ಯೋಚಿಸಿ. ಅವಸರದ ಪ್ರತಿಕ್ರಿಯೆ ತೋರದಿರಿ.ಸಹನೆ ಮುಖ್ಯ.  ನಿರೀಕ್ಷಿಸದ ವ್ಯಕ್ತಿಯಿಂದ  ನೆರವು ಪಡೆಯುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!