SHOCKING| ‘ಟೊಮ್ಯಾಟೊ ದುರಂತ’ ಬೆಳೆ ಕಾಯುತ್ತಿದ್ದ ರೈತನ ಕತ್ತು ಹಿಸುಕಿ ಕೊಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೊಮ್ಯಾಟೊಕ್ಕೆ ಚಿನ್ನದ ಬೆಲೆ ಬಂದಿದ್ದು, ಹಗಲು ರಾತ್ರಿ ತಮ್ಮ ಬೆಳೆಯನ್ನು ಕಾಪಾಡಿಕೊಳ್ಳೋದಕ್ಕೆ ರೈತರು ಹರಸಾಹಸ ಮಾಡುತ್ತಿದ್ದಾರೆ.

ಇತ್ತ ದುಷ್ಕರ್ಮಿಗಳು ಚಿನ್ನ ಬೆಳ್ಳಿ ಲೂಟಿ ಬಿಟ್ಟು ಟೊಮ್ಯಾಟೊದತ್ತ ವಾಲಿದ್ದಾರೆ. ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪೆದ್ದ ತಿಪ್ಪಸಮುದ್ರದಲ್ಲಿ ಟೊಮ್ಯಾಟೊ ಬೆಳೆ ಕಾಯುತ್ತಿದ್ದ ರೈತನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.

ರೈತನಾದ ಮಧುಕರ ರೆಡ್ಡಿ ಎಂದಿನಂತೆ ರಾತ್ರಿ ತಮ್ಮ ಬೆಳೆಯನ್ನು ಕಾಯಲು ಬಂದಿದ್ದರು, ಮಧ್ಯರಾತ್ರಿ ನಿದ್ದೆ ಬಂದು, ಸ್ವಲ್ಪ ಸಮಯಕ್ಕೆ ಕಣ್ಣು ಮುಚ್ಚಿ ನಿದ್ದೆಗೆ ಜಾರಿದ್ದರು. ಈ ವೇಳೆ ಬಂದ ದುಷ್ಕರ್ಮಿಗಳು ಮಧುಕರ ರೆಡ್ಡಿ ಕತ್ತು ಹಿಸುಕಿ ಕೊಂದಿದ್ದಾರೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಟೊಮ್ಯಾಟೊಗಾಗಿ ವಾರದಲ್ಲಿ ನಡೆದ ಎರಡನೇ ಕೊಲೆ ಇದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!