ಸಾರಿಗೆ ಬಸ್- ಸ್ಕೂಟರ್ ಡಿಕ್ಕಿ: ಸವಾರರಿಬ್ಬರು ಸ್ಥಳದಲ್ಲೇ ಸಾವು

ಹೊಸದಿಗಂತ ವರದಿ, ವಿಜಯಪುರ:

ಸಾರಿಗೆ ಬಸ್- ಸ್ಕೂಟರ್ ಮುಖಾಮುಖಿ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ನಗರ ಹೊರ ವಲಯದ ಅಲ್- ಅಮೀನ್ ಮೆಡಿಕಲ್ ಕಾಲೇಜ್ ಎದುರಿನ ರಸ್ತೆಯಲ್ಲಿ ನಡೆದಿದೆ.

ಮೃತಪಟ್ಟವರನ್ನು ತಿಕೋಟಾದ ವಿಶಾಲ ಬಾಲಕೃಷ್ಣ ಶಿಂಧೆ (22), ರಮೇಶ ಪ್ರಕಾಶ ಮಾಶ್ಯಾಳ (20) ಎಂದು ಗುರುತಿಸಲಾಗಿದೆ.

ವಿಶಾಲ ಶಿಂಧೆ ಹಾಗೂ ರಮೇಶ ಮಾಶ್ಯಾಳ ಈ ಇಬ್ಬರು ಸ್ಕೂಟರ್ ಮೇಲೆ ತಿಕೋಟಾ ಕಡೆಗೆ ತೆರಳುತ್ತಿದ್ದಾಗ, ಎದುರಿಗೆ ಬಂದ ಸಾರಿಗೆ ಮಧ್ಯೆ ಅಪಘಾತ ಸಂಭವಿಸಿದೆ.

ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!