ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಎಂಟನೇ ಸಮನ್ಸ್ ಜಾರಿ ಮಾಡಿದೆ.
ಮೊದಲ ಸಮನ್ಸ್ ಅನ್ನು ನವೆಂಬರ್ 2, 2023 ರಂದು ಮತ್ತು ಎರಡನೇ ಸಮನ್ಸ್ ಅನ್ನು ಡಿಸೆಂಬರ್ 21, 2023 ರಂದು ಕಳುಹಿಸಲಾಗಿತ್ತು. ಮೂರನೇ ಸಮನ್ಸ್ ಅನ್ನು ಜನವರಿ 3, ೨೦೨೪ ರಂದು ನೀಡಲಾಗಿತ್ತು. ಹೀಗೆ ಸತತವಾಗಿ ಒಟ್ಟು ಏಳು ಸಮನ್ಸ್ ಅನ್ನು ED ಅಧಿಕಾರಿಗಳು ಕೇಜ್ರಿವಾಲ್ ಅವರಿಗೆ ನೀಡಲಾಗಿತ್ತು.
ಆದರೆ ಇದುವರೆಗೂ ಯಾವುದೇ ವಿಚಾರಣೆಗೆ ಅವರು ಹಾಜರಾಗದ ಹಿನ್ನೆಲೆಯಲ್ಲಿ ಇದೀಗ ಅವರಿಗೆ ಎಂಟನೇ ಸಮನ್ಸ್ ಅನ್ನು ED ಅಧಿಕಾರಿಗಳು ನೀಡಿದ್ದಾರೆ.