ಹೊಸದಿಗಂತ ವರದಿ, ವಿಜಯಪುರ:
ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಜಿಲ್ಲೆಯ ಮುದ್ದೇಬಿಹಾಳ- ನಾಲತವಾಡ ರಸ್ತೆಯ ಹಿರೇಮುರಾಳ ಗ್ರಾಮದ ಹತ್ತಿರ ಅಡವಿ ಸೋಮನಾಳ ಕ್ರಾಸನಲ್ಲಿ ನಡೆದಿದೆ.
ಮೃತನನ್ನು ತಾಳಿಕೋಟೆ ತಾಲೂಕು ಮೂಕಿಹಾಳ ಗ್ರಾಮದ ರಾಜು ಮೂಕಿಹಾಳ (23) ಎಂದು ಗುರ್ತಿಸಲಾಗಿದೆ.
ರಾಜು ಮೂಕಿಹಾಳ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಯಾವುದೋ ಭಾರಿ ವಾಹನವೇ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ.
ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.