ನಮಸ್ತೆ ಕಾಶಿ ಯಾತ್ರೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ

ದಿಗಂತ ವರದಿ ಹುಬ್ಬಳ್ಳಿ:

ನಗರದ ನೈರುತ್ಯ ರೈಲ್ವೆ ನಿಲ್ದಾಣದಲ್ಲಿ ಧಾರವಾಡ ಜಿಲ್ಲಾ “ನಮಸ್ತೆ ಕಾಶಿ” ಯಾತ್ರೆಗೆ 150 ಕಾರ್ಯಕರ್ತರು ವಾರಣಾಸಿ ಹೋಗುತ್ತಿದ್ದು, ಅವರ ಯಾತ್ರೆ ಶುಭವಾಗಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು.
ಕಾಶಿ ಪುನನಿರ್ಮಾಣದ ರೂವಾರಿ ಪ್ರಧಾನಿ ನರೇಂದ್ರ ಮೋದಿಯವರ ಸದಿಚ್ಛೆಯಂತೆ ಕಾಶಿ ಕಾರಿಡಾರ್ ಅದ್ಭುತವಾಗಿ ನಿರ್ಮಿಸಿರುವ ಭವ್ಯ ಕಾಶಿ, ದಿವ್ಯ ಕಾಶಿ’ ದರ್ಶನ ಪಡೆಯಲು ದೇಶದ್ಯಾಂತ ಕಾಶಿ ವಿಶ್ವನಾಥ ದರ್ಶನ ಪಡೆಲು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಮಾತನಾಡಿ, ಪ್ರಧಾನಿ ಮೋದಿಯವರ ಕನಸಿನಂತೆ ವಾರಣಾಸಿಯ ಕಾಶಿ ಅದ್ಭುತವಾಗಿ ನಿರ್ಮಾಣ ಮಾಡಲಾಗಿದೆ. ಆದರಿಂದ ದೇಶದಿಂದ ನಮಸ್ತೆ ಕಾಶಿಎಂಬ ಯಾತ್ರೆ ಆಯೋಜಿಸಿದ್ದು, ಧಾರವಾಡ ಜಿಲ್ಲೆಯಿಂದ 150 ಕ್ಕೂ ಹೆಚ್ಚು ಕಾರ್ಯಕರ್ತರು ಕಾಶಿ ವಿಶ್ವನಾಥ ದರ್ಶನ ಭಾಗ್ಯ ಪಡೆಯಲು ಹೋಗುತ್ತಿದ್ದಾರೆ. ಅವರಿಗೆ ಶುಭವಾಗಲಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!