ಫಲಕಾರಿಯಾಗದ ಚಿಕಿತ್ಸೆ: ಗಾಯಾಳು ಕುದುರೆ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ರಸ್ತೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ವೇಳೆ ರಸ್ತೆ ತಿರುವಿನಲ್ಲಿ ಎದುರುಗಡೆ ಬಂದ ಬಸ್ಸೊಂದುಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ಕುದುರೆ ಸಾವನ್ನಪ್ಪಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಇಳಂತಿಲ ಗ್ರಾಮದ ಪೆದಮಲೆ ಎಂಬಲ್ಲಿ ಇಂದು ಮುಂಜಾನೆ ಕುದುರೆ ಸವಾರ ಸಚಿನ್ ಪೆಲಪ್ಪಾರ್ ಎಂಬವರು ಸವಾರಿ ಮಾಡುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಬಸ್ಸೊಂದು ಡಿಕ್ಕಿ ಹೊಡೆಯಿತು. ಇದರಿಂದ ತಲೆಗೆ ಗಂಭೀರ ಸ್ವಾರೂಪದ ಗಾಯ ಪಡೆದ ಕುದುರೆಯು ರಸ್ತೆಯಲ್ಲೇ ಕುಸಿದು ಬಿದ್ದಿತು. ಘಟನೆಯಿಂದ ಕುದುರೆಯನ್ನು ಸವಾರಿ ಮಾಡುತ್ತಿದ್ದ ಸಚಿನ್ ರವರು ಗಾಯಗೊಂಡಿದ್ದು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುದುರೆಯನ್ನು ಕ್ರೇನ್ ಮೂಲಕ ಲಾರಿಗೆ ಹಾಕಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತ್ತಾದರೂ ಮೆದುಳಿಗೆ ತೀವ್ರ ತರಹದ ಗಾಯ ಪಡೆದ ಕುದುರೆ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!